ಅತ್ತೆಯ ಗುಣನಡತೆಯಲ್ಲಿ ದೋಷ ಆರೋಪಿಸಿ ಕೊಂದು 19 ತುಂಡುಗಳಾಗಿ ಮಾಡಿ ವಿವಿಧ ಕಡೆಗಳಲ್ಲಿ ಉಪೇಕ್ಷಿಸಿದ ದಂತವೈದ್ಯ

ತುಮಕೂರು: ಗುಣ ನಡತೆಯಲ್ಲಿ ದೋಷ ಆರೋಪಿಸಿ ಪುತ್ರಿಯ ಪತಿ ದಂತವೈದ್ಯರಾಗಿರುವ ವ್ಯಕ್ತಿ ಅತ್ತೆಯನ್ನು ಕೊಂದು ಮೃತದೇಹವನ್ನು 19 ತುಂಡುಗಳ ನ್ನಾಗಿ ಮಾಡಿ ವಿವಿಧ ಕಡೆಗಳಲ್ಲಿ ಉಪೇಕ್ಷಿಸಿದ ಧಾರುಣ ಘಟನೆ ನಡೆದಿದೆ. ಪ್ರಕರಣದಲ್ಲಿ ಅಳಿಯ ಸಹಿತ ಮೂರು ಮಂದಿಯನ್ನು ಸೆರೆ ಹಿಡಿಯಲಾಗಿದೆ. ಡಾ| ರಾಮ ಚಂದ್ರಪ್ಪ ಎಸ್. ಹಾಗೂ ಇತರ ಇಬ್ಬರು ಸಹಾಯಕರು ಸೆರೆಯಾದ ವರಾಗಿದ್ದಾರೆ. ತುಮಕೂರಿನ ಬೆಲ್ಲಾವಿ ನಿವಾಸಿಯಾದ ಲಕ್ಷ್ಮಿದೇವಿ ಅಮ್ಮ ಕೊಲೆಗೀಡಾ ದವರು. ಕಳೆದ ೭ರಂದು  ಬೀದಿನಾಯಿ ಮನುಷ್ಯನ ಕೈಯ ಅವಶಿಷ್ಟವನ್ನು ಕಚ್ಚಿಕೊಂಡು ಹೋಗುತ್ತಿರುವುದು ಗಮನಕ್ಕೆ …

ಕಳೆದುಹೋದ ಚಿನ್ನದ ಸರ ಮನೆ ವರಾಂಡದಲ್ಲಿ ಪ್ರತ್ಯಕ್ಷ: ತಂದಿರಿಸಿದ ವ್ಯಕ್ತಿ ಬರೆದ ಪತ್ರವೂ ಲಭ್ಯ

ಕಾಸರಗೋಡು: ಕಳೆದು ಹೋಯಿತೆಂದು ಎಣಿಸಿದ್ದ ೪ ಪವನ್ ತೂಕದ ಚಿನ್ನಾಭರಣ ಮನೆ ವರಾಂಡದಲ್ಲಿ ಪತ್ತೆಯಾಗಿದೆ. ಜೊತೆಗೆ ಒಂದು ಪತ್ರವೂ ಲಭಿಸಿದೆ. ಪೊಯಿನಾಚಿ ಪರಂಬ್ ನಿವಾಸಿ ನಿವೃತ್ತ ಕಂದಾಯ ಇಲಾಖೆ ಅಧಿಕಾರಿ ದಾಮೋದರನ್‌ರ ಪತ್ನಿ ಗೀತಾರ ಚಿನ್ನದ ಸರ ೧೦ ದಿನದ ಹಿಂದೆ ಬಸ್ ಪ್ರಯಾಣ ವೇಳೆ ಕಳೆದು ಹೋಗಿತ್ತು. ಅಪಹರಿಸಿದ್ದೋ, ಬಿದ್ದು ಹೋದದ್ದೋ ಎಂದು ತಿಳಿದು ಬಂದಿರಲಿಲ್ಲ. ಆದರೆ ಸರವನ್ನು ಕಂಡಾಗ ತಂದಿರಿಸಿದ ವ್ಯಕ್ತಿಯ ಉತ್ತಮ ಮನಸ್ಸಿನ ಬಗ್ಗೆ ಮನೆಯವರು ಪ್ರಶಂಸೆ ವ್ಯಕ್ತಪಡಿಸಿದರು. ಸರದ ಜೊತೆಗೆ ಲಭಿಸಿದ …

ನಗರಸಭಾ ಕುಟುಂಬಶ್ರೀ ಸಿಡಿಎಸ್ ಆಶ್ರಯದಲ್ಲಿ ಅಮೈ ಬಯಲಿನಲ್ಲಿ ಮಳೆ ಕೊಯ್ಲು

ಕಾಸರಗೋಡು: ನಗರಸಭೆಯ  ಸಿಡಿಎಸ್‌ನ ನೇತೃತ್ವದಲ್ಲಿ 18ನೇ ವಾರ್ಡ್ ಅಮೈ ಬಯಲಿನಲ್ಲಿ ಮಳೆ ಕೊಯ್ಲು ನಡೆಸಲಾಯಿತು. ಹೊಸ ತಲೆಮಾರನ್ನು ಕೃಷಿಗೆ ಆಕರ್ಷಿಸುವ ಹಿನ್ನೆಲೆಯಲ್ಲಿ ವಿವಿಧ ಸಾಂಸ್ಕೃತಿಕ ಕ್ರೀಡಾ ಕಾರ್ಯಕ್ರಮಗಳೊಂದಿಗೆ ಅಮೈ ಬಯಲಿನ ಮೂರು ಎಕ್ರೆ ಸ್ಥಳದಲ್ಲಿ ಕಾರ್ಯಕ್ರಮ ನಡೆಸಿ ಕೃಷಿ ಕೈಗೊಳ್ಳಲಾಗಿದೆ. ಸಂಸದ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿದರು. ಆಯಿಷಾ ಇಬ್ರಾಹಿಂ ಅಧ್ಯಕ್ಷತೆ ವಹಿಸಿದರು. ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಮುಖ್ಯ ಅತಿಥಿಯಾಗಿದ್ದರು. ಶಂಸೀದಾ ಫಿರೋಸ್, ಸಹೀರ್ ಆಸಿಫ್, ಖಾಲಿದ್ ಪಚ್ಚಕ್ಕಾಡ್, ವಿಮಲ ಶ್ರೀಧರ್, ಅಬ್ದುಲ್ ಜಲೀಲ್, ಉಣ್ಣಿ ಕೃಷ್ಣನ್, …

ಜಿಲ್ಲಾ ಕುಲಾಲ ಸಂಘದಿಂದ ಚಿಕಿತ್ಸಾ ಸಹಾಯ ಹಸ್ತಾಂತರ

ಮಂಜೇಶ್ವರ: ಜಿಲ್ಲಾ ಕುಲಾಲ ಸಂಘ ಮಂಜೇಶ್ವರ ಇದರ ಆಶ್ರಯದಲ್ಲಿ ಕುಲಾಲ ಬಂಧುಗಳ ಸಹಕಾರದಿಂದ ರೂಪೀಕರಿಸಿದ ಕುಲಾಲ ಸಮಾಜದ ‘ನೊಂದ ಜೀವಕ್ಕೊಂದು ಆಸರೆ’ ಯೋಜನೆಯಂತೆ 10ನೇ ಸಹಾಯವನ್ನು ಕುಲಾಲ ಸಂಘ ಮೀಂಜ ಶಾಖೆಯ ಮದಂಗಲ್ಲುಕಟ್ಟೆ ಗೌರಿಮೂಲೆ ಜಯರಾಜ್‌ರ ಚಿಕಿತ್ಸೆಗಾಗಿ ಹಸ್ತಾಂತ ರಿಸಲಾಯಿತು. ತೂಮಿನಾಡಿನಲ್ಲಿರುವ ಜಿಲ್ಲಾ ಕುಲಾಲ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ರವೀಂದ್ರ ಮನ್ನಿಪ್ಪಾಡಿ ಹಸ್ತಾಂತರಿಸಿದರು. ಹಲವಾರು ಗಣ್ಯರು ಉಪಸ್ಥಿತರಿದ್ದರು.