ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರ ಅಷ್ಟಬಂಧ ಬ್ರಹ್ಮಕಲಶೋತ್ಸವ: ಕೊಂಡೆವೂರು ಶ್ರೀಗಳಿಂದ ಧಾರ್ಮಿಕ ಸಭೆ ಉದ್ಘಾಟನೆ

ಕಾಸರಗೋಡು: ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಜರಗುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ನಿನ್ನೆ ನಡೆದ ಧಾರ್ಮಿಕ ಸಭೆಯನ್ನು ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನಗೈದರು. ಬ್ರಹ್ಮಕಲಶೋತ್ಸವ ಸಮಿತಿ ರಕ್ಷಾಧಿಕಾರಿ ನ್ಯಾಯವಾದಿ ಎ. ಸದಾನಂದ ರೈ ಅಧ್ಯಕ್ಷತೆ ವಹಿಸಿದರು. ಮಲ್ಲ ಕ್ಷೇತ್ರದ ಆಡಳಿತ ಮೊಕ್ತೇಸರ ಸತ್ಯನಾರಾಯಣ ಭಟ್ ಆನೆಮಜಲು ಉಪಸ್ಥಿತರಿದ್ದರು. ಕ್ರೈಮ್‌ಬ್ರಾಂಚ್ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಬಾಲಕೃಷ್ಣನ್ ನಾಯರ್ ಪಿ, ನ್ಯಾಯವಾದಿ ನಾರಾಯಣ ಭಟ್, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ನ್ಯಾಯವಾದಿ ಪಿ. ಮುರಳೀ …

ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ  5ನೇವರ್ಷದ ದತ್ತಿನಿಧಿ ಪ್ರಶಸ್ತಿ ಪ್ರದಾನ ಮೇ 16ರಂದು

ಕಾಸರಗೋಡು: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ೫ನೇ ವರ್ಷದ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಕನ್ನಡ ಸಂಸ್ಕೃತಿ ಉತ್ಸವ ಮೇ ೧೬ರಂದು ಕುಡಾಲುಮೆರ್ಕಳ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.ಪೂರ್ವಭಾವಿಯಾಗಿ ಸ್ವಾಗತ ಸಮಿತಿ ರಚನೆ ಸಭೆ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು. ಜಿ.ಪಂ. ಸದಸ್ಯ ಸೋಮಶೇಖರ ಜೆ.ಎಸ್. ಉದ್ಘಾಟಿಸಿ ದರು. ಶಾಲಾ ವ್ಯವಸ್ಥಾಪಕ ಬಿ.ಎ. ಖಾದರ್ ಅಧ್ಯಕ್ಷತೆ ವಹಿಸಿದರು. ಬ್ಲಾಕ್ ಪಂಚಾಯತ್ ಸದಸ್ಯ ಬಿ.ಎ. ಬಶೀರ್ ಕೊಟ್ಟೂಡಲ್, ಪಂಚಾಯತ್ ಸದಸ್ಯರಾದ ಶಶಿಕಲಾ ರೈ …

ಬಿದ್ದು ಸಿಕ್ಕಿದ ಪರ್ಸ್ ವಾರಸುದಾರರಿಗೆ ಹಸ್ತಾಂತರಿಸಿ  ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ಕುಂಬಳೆ: ರಸ್ತೆಯಲ್ಲಿ ಬಿದ್ದು ಸಿಕ್ಕಿದ ಹಣ ಹಾಗೂ ದಾಖಲೆಪತ್ರಗಳಿದ್ದ ಪರ್ಸನ್ನು ಆಟೋ ರಿಕ್ಷಾ ಚಾಲಕ ವಾರಸುದಾರರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಪೆರ್ಮುದೆಯ ಆಟೋ ಚಾಲಕ ಮನು ಎಂಬವರು ನಿನ್ನೆ ಸಂಜೆ ೪ ಗಂಟೆಗೆ ಉಪ್ಪಳ ಭಾಗಕ್ಕೆ ತೆರಳುತ್ತಿದ್ದಾಗ ಬೇಕೂರಿನ ರಸ್ತೆಯಲ್ಲಿ  ಪರ್ಸ್ ಬಿದ್ದಿತ್ತು. ಅದನ್ನು ಹೆಕ್ಕಿ ಪರಿಶೀಲಿಸಿ ದಾಗ ೧೦ ಸಾವಿರ ರೂಪಾಯಿ, ಎಟಿಎಂ ಕಾರ್ಡ್, ಲೈಸನ್ಸ್ ಮೊದಲಾದವುಗಳಿದ್ದವು. ಲೈಸನ್ಸ್‌ನ ವಿಳಾಸದ ಆಧಾರದಲ್ಲಿ ಶೋಧ ನಡೆಸಿದಾಗ ಅದು ಪೈವಳಿಕೆ ಬಾಯಿಕಟ್ಟೆಯ ಮೊಹಮ್ಮದ್ ಹಾರಿಫ್‌ರದ್ದಾಗಿದೆಯೆಂದು ತಿಳಿದು ಬಂತು. ಕೂಡಲೇ …

ಬೇಕೂರಿನಲ್ಲಿ ವೊಲ್ಟೇಜ್ ಕ್ಷಾಮ : ಸ್ಥಳೀಯರಿಗೆ ವಿವಿಧ ಸಮಸ್ಯೆ

ಉಪ್ಪಳ: ಮಂಗಲ್ಪಾಡಿ ಪಂಚಾ ಯತ್ ವ್ಯಾಪ್ತಿಯ ಬೇಕೂರು ಪರಿಸರಗಳಲ್ಲಿ ವಿದ್ಯುತ್ ವೋಲ್ಟೇಜ್ ಕ್ಷಾಮ ತೀವ್ರಗೊಂಡಿದೆಯೆಂದು ದೂರಲಾಗಿದೆ. ನೂರಾರು ಮನೆಗಳಿ ರುವ ಈ ಪ್ರದೇಶದಲ್ಲಿ ವೋಲ್ಟೇಜ್ ಕ್ಷಾಮದಿಂದಾಗಿ ರಾತ್ರಿ ಕಾಲಗಳಲ್ಲಿ ವಿದ್ಯಾರ್ಥಿಗಳಿಗೆ ಓದಲು, ಮನೆ ಮಂದಿಗೆ ಗೃಹೋಪಕರಣಗಳನ್ನು ಉಪಯೋಗಿಸಲು, ವ್ಯಾಪಾರಿ ಸಂಸ್ಥೆಗಳು, ಉದ್ದಿಮೆಗಳು ಕಾರ್ಯಾ ಚರಿಸಲು ಸಾಧ್ಯವಾಗುತ್ತಿಲ್ಲವೆನ್ನಲಾಗಿದೆ. ಬಿಸಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಫ್ಯಾನ್, ಎಸಿಯನ್ನು ಉಪ ಯೋಗಿಸಲು ಸಾದ್ಯವಾಗದ ಸ್ಥಿತಿಯೂ ಇದೆಯೆನ್ನಲಾಗಿದೆ. ಇದರಿಂದಾಗಿ ಸ್ಥಳೀಯರು ಸಂಕಷ್ಟದಲ್ಲಿದ್ದಾರೆ. ಈ ಪರಿಸರದಲ್ಲಿ ಸಂಪರ್ಕ ಹೆಚ್ಚಾಗಿ ಟ್ರಾನ್ಸ್‌ಫಾರ್ಮ್‌ಗೆ ಲೋಡ್ ಹೆಚ್ಚಾಗಿರುವುದೇ ವೋಲ್ಟೇಜ್ ಕ್ಷಾಮಕ್ಕೆ …

ಬಂದ್ಯೋಡು ಅಡ್ಕದಲ್ಲಿ ಮೂರು ಮನೆಗಳಿಂದ ಕಳವಿಗೆತ್ನ: ಕಳ್ಳನ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ; ತನಿಖೆ ತೀವ್ರಗೊಳಿಸಿದ ಪೊಲೀಸ್

ಕುಂಬಳೆ: ಬಂದ್ಯೋಡು ಅಡ್ಕ ಎಂಬಲ್ಲಿನ 3 ಮನೆಗಳಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು  ಪ್ರಕರಣ ದಾಖಲಿಸಿ ತನಿಖೆ ತೀವ್ರಗೊಳಿಸಿದ್ದಾರೆ.  ಅಡ್ಕ ಚುಕ್ರಿಯಡ್ಕದ ಹನೀಫ, ನೆರೆಮನೆ ನಿವಾಸಿಗಳಾದ ಮುಹಮ್ಮದ್, ಅಬ್ದುಲ್ಲ ಎಂಬಿವರ ಮನೆಗಳಿಂದ ಕಳವಿಗೆತ್ನ ನಡೆದಿದೆ. ನಿನ್ನೆ ಮುಂಜಾನೆ 4 ಗಂಟೆ ವೇಳೆ ಹನೀಫರ ಮನೆಗೆ ಕಳ್ಳ ನುಗ್ಗಿದ್ದಾನೆ. ಅಡುಗೆಕೋಣೆ ಭಾಗದ ಬಾಗಿಲನ್ನು ತೆರೆದು ಒಳನುಗ್ಗಿದ ಕಳ್ಳ ಮೇಲಂತಸ್ತಿನ ಕೊಠಡಿಗೆ ತಲುಪಿದ್ದನು. ಅಲ್ಲಿದ್ದ ಕಪಾಟುಗಳನ್ನು ತೆರೆದು ಬಟ್ಟೆಬರೆಗಳನ್ನೆಲ್ಲ ಚೆಲ್ಲಾಪಿಲ್ಲಿಗೊಳಿಸಿ ದ್ದಾನೆ. ಬಳಿಕ ಹನೀಫ ಹಾಗೂ ಪತ್ನಿ ನಿದ್ರಿಸಿದ್ದ …

ಕುಂಬಳೆಯಲ್ಲಿ ಯುವಕನನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣ: ವಿದೇಶಕ್ಕೆ ಪರಾರಿಯಾಗಲೆತ್ನಿಸುತ್ತಿದ್ದಾಗ ಬೋವಿಕ್ಕಾನ ನಿವಾಸಿ ಚೆನ್ನೈಯಲ್ಲಿ ಬಂಧನ

ಕುಂಬಳೆ: ಯುವತಿಯೋರ್ವೆ ಯೊಂದಿಗಿನ ಪ್ರೇಮದ ವಿಷಯಕ್ಕೆ ಸಂಬಂಧಿಸಿ ಯುವಕನನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಸೆರೆಗೀಡಾಗಿದ್ದಾನೆ. ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಬೋವಿ ಕ್ಕಾನದ ಅಮೀನ್ ಸಫ್ವಾನ್ ಎಂಬಾತ ಸೆರೆಗೀಡಾದ ಆರೋಪಿಯಾಗಿದ್ದಾನೆ. ವಿದೇಶಕ್ಕೆ ಪರಾರಿಯಾಗಲು ಯತ್ನಿಸುತ್ತಿ ದ್ದಾಗ ಈತನನ್ನು ಸೆರೆಹಿಡಿಯಲಾಗಿದೆ. ಪೊಲೀಸರು ಬಹಿರಂಗಗೊಳಿಸಿದ ನೋಟೀಸ್‌ನ ಪ್ರಕಾರ ಯುವಕನನ್ನು ಗುರುತುಹಚ್ಚಿದ ವಿಮಾನ ನಿಲ್ದಾಣ ಅಧಿಕಾರಿಗಳು ಆರೋಪಿಯನ್ನು ತಡೆದು ನಿಲ್ಲಿಸಿದ್ದರು. ಈ ಬಗ್ಗೆ ಮಾಹಿತಿ ಲಭಿಸಿದ ಕುಂಬಳೆ ಪೊಲೀಸರು ಚೆನ್ನೈಗೆ ತೆರಳಿದ್ದಾರೆ. ಮಾರ್ಚ್ 30ರಂದು ರಾತ್ರಿ …

ಮನೆಯಿಂದ ಹೊರ ಹೋದ ವ್ಯಕ್ತಿ ನಾಪತ್ತೆ

ವರ್ಕಾಡಿ: ಮನೆಯಿಂದ ಹೊರ ಹೋದ ವ್ಯಕ್ತಿ ನಾಪತ್ತೆಯಾದ ಬಗ್ಗೆ ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿದೆ. ಕೊಡ್ಲಮೊಗರು ಜೋಗಿಬೆಟ್ಟು ನಿವಾಸಿ ಲಿಂಗಪ್ಪ ಪೂಜಾರಿಯವರ ಪುತ್ರ ಕೋಟಿ ಜೆ. (39) ನಾಪತ್ತೆಯಾದವರು. ಈ ತಿಂಗಳ 10ರಂದು ಸಂಜೆ 6.30ಕ್ಕೆ ಮನೆಯಿಂದ ಹೊರ ಹೋಗಿದ್ದ ಇವರು ಆ ಬಳಿಕ ಮರಳದೆ ನಾಪತ್ತೆಯಾಗಿದ್ದಾರೆ. ಸಂಬಂಧಿಕರು  ವಿವಿಧ ಕಡೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಸಹೋದರ ಚೆನ್ನಯ್ಯ ಜೋಗಿಬೆಟ್ಟು ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಕೇಸು ದಾಖಲಿಸಿದ ಪೊಲೀಸರು ತನಿಖೆ ಆರಂಭಿಸಿದ್ದು, ಇವರು ಪತ್ತೆಯಾದರೆ ಮಂಜೇಶ್ವರ …

ಕೊಂಡೆವೂರು ಆಶ್ರಮಕ್ಕೆ ಬಂದ ಯುವತಿ ನಾಪತ್ತೆ

ಉಪ್ಪಳ: ಕೊಂಡೆವೂರು ಆಶ್ರಮಕ್ಕೆ ಬಂದಿದ್ದ ಕರ್ನಾಟಕ ನಿವಾಸಿಯಾದ ಯುವತಿ ದಿಢೀರ್ ನಾಪತ್ತೆಯಾದ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಜಕ್ಕನಹಳ್ಳಿ ನಿವಾಸಿ  ಅಕ್ಷಿತಾ (19) ನಾಪತ್ತೆಯಾಗಿ ದ್ದಾಳೆಂದು ದೂರಲಾಗಿದೆ.   ಅಕ್ಷಿತಾ ತಾಯಿ ಯಶೋಧ, ಸಹೋದರಿ ಭೂಮಿಕ ಹಾಗೂ ಓರ್ವ ಸಹೋ ದರನೊಂದಿಗೆ  ನಿನ್ನೆ ಬೆಳಿಗ್ಗೆ 9.30ರ ವೇಳೆ ಕೊಂಡೆವೂರು ಆಶ್ರಮಕ್ಕೆ ತಲುಪಿದ್ದರು.  ಬಳಿಕ 10.30ರ ವೇಳೆ ಅಕ್ಷಿತಾ ಅಲ್ಲಿಂದ ನಾಪತ್ತೆಯಾಗಿ ರುವುದಾಗಿ ಹೇಳಲಾಗುತ್ತಿದೆ.  ಇದರಿಂದ ಆ ಪರಿಸರದಲ್ಲಿ ಹುಡುಕಿದರೂ ಅಕ್ಷಿತಾ ಪತ್ತೆಯಾಗದ ಹಿನ್ನೆಲೆಯಲ್ಲಿ ಸಹೋದರಿ ಭೂಮಿಕ ಮಂಜೇಶ್ವರ ಪೊಲೀಸರಿಗೆ …

ವ್ಯಕ್ತಿ ಮನೆಯೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಪೆರ್ಲ:  ವ್ಯಕ್ತಿಯೊಬ್ಬರು ಮನೆಯ ಅಡುಗೆ ಕೋಣೆಯಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪಡ್ರೆ ವಾಣೀನಗರ ಅಜೆಕ್ಕಳಮೂಲೆ ಪೊಯ್ಯೆ ನಿವಾಸಿ ಕುಂಞಿರಾಮ ಮಣಿಯಾಣಿಯವರ ಪುತ್ರ ಸುರೇಶ್ ಮಣಿಯಾಣಿ (60) ಮೃತಪಟ್ಟ ವ್ಯಕ್ತಿ. ಶನಿವಾರ ಬೆಳಿಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆ ಮಧ್ಯೆ ಇವರು ಸಾವಿಗೀಡಾಗಿರುವುದಾಗಿ ಅಂ ದಾಜಿಸಲಾಗಿದೆ. ಇವರು ನೇಣುಬಿಗಿದು ಸಾವಿಗೆ ಶರಣಾಗಲು ಕಾರಣವೇನೆಂದು ತಿಳಿದುಬಂದಿಲ್ಲ. ಘಟನೆ ಬಗ್ಗೆ ಬದಿಯಡ್ಕ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಪತ್ನಿ ಸೀತಮ್ಮ, ಮಕ್ಕಳಾದ ರಾಜೇಶ್ವರಿ,ಸುಚಿತ್ರ, ಕೃಷ್ಣ ಕುಮಾರ್, …

ಯುವಕನಿಗೆ ಹಲ್ಲೆಗೈದು ಕೊಲೆ ಬೆದರಿಕೆ: ನಾಲ್ವರ ಬಂಧನ

ಉಪ್ಪಳ: ವರ್ಕಾಡಿ ಕಳಿಯೂರು ಪಡ್ಪಿನಕೆರೆಯ ರಾಕೇಶ್ (37) ಎಂಬವರಿಗೆ ಹಲ್ಲೆಗೈದು ಕೊಲೆಬೆದರಿಕೆ ಯೊಡ್ಡಿದ ಪ್ರಕರಣದಲ್ಲಿ ಆರೋಪಿಗ ಳಾದ ನಾಲ್ಕು ಮಂದಿಯನ್ನು ಮಂಜೇ ಶ್ವರ ಪೊಲೀಸರು ಬಂಧಿಸಿದ್ದಾರೆ.  ಕಳಿಯೂರು ನಿವಾಸಿಗಳಾದ ಅಶ್ವಿನ್ ಕುಮಾರ್ ಕೆ (26),  ಅಭಿಷೇಕ್ (23), ಮನೋಜ್ ಕುಮಾರ್ ಕೆ (27), ಅನಿಲ್ ಕುಮಾರ್ ಕೆ (29) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಇವರನ್ನು ಪೊಲೀಸರು ನ್ಯಾಯಾ ಲಯದಲ್ಲಿ ಹಾಜರುಪಡಿಸಿದ್ದು, ಈ ವೇಳೆ ಇವರಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಈ ತಿಂಗಳ 11ರಂದು ರಾತ್ರಿ 9 ಗಂಟೆಗೆ  …