ಬಾಯಾರು ಕುಟುಂಬ ಆರೋಗ್ಯ ಕೇಂದ್ರ ಕಟ್ಟಡ ಉದ್ಘಾಟನೆ ವಿಳಂಬ: ಯುಡಿಎಫ್ನಿಂದ ಧರಣಿ
ಪೈವಳಿಕೆ: ಬಾಯಾರು ಕುಟುಂಬ ಆರೋಗ್ಯ ಕೇಂದ್ರದ ನೂತನ ಕಟ್ಟಡ ನಿರ್ಮಾಣಗೊಂಡು ಎರಡು ವರ್ಷ ಕಳೆದರೂ ಉದ್ಘಾಟಿಸಲು ಕ್ರಮ ಕೈಗೊಳ್ಳದ ಸರಕಾರದ ಧೋರಣೆಯನ್ನು ಖಂಡಿಸಿ ಯುಡಿಎಫ್ ಪೈವಳಿಕೆ ಪಂಚಾಯತ್ ಸಮಿತಿ ನೇತೃತ್ವದಲ್ಲಿ ಕುಟುಂಬ ಆರೋಗ್ಯ ಕೇಂದ್ರಕ್ಕೆ ಪ್ರತಿಭಟನಾ ಮಾರ್ಚ್, ಧರಣಿ ನಡೆಸಲಾಯಿತು.
ಆರೋಗ್ಯ ಕೇಂದ್ರದಲ್ಲಿ ಅಗತ್ಯ ವೈದ್ಯರ, ಸಿಬ್ಬಂದಿಗಳ ನೇಮಕಾತಿ, ಸಂಜೆ ಕೂಡಾ ಚಿಕಿತ್ಸಾ ಸೌಲಭ್ಯ ಏರ್ಪಡಿಸು ವುದು, ಔಷಧಿಗಳ ಲಭ್ಯತೆ ಖಾತರಿಪಡಿ ಸುವುದು ಮೊದಲಾದ ಬೇಡಿಕೆ ಮುಂದಿರಿಸಿ ಧರಣಿ ನಡೆಸಲಾಗಿದೆ. ಯುಡಿಎಫ್ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಬ್ದುಲ್ ಅಸೀಸ್ ಮರಿಕೆ ಉದ್ಘಾಟಿಸಿದರು. ಪಂಚಾಯತ್ ಸಮಿತಿ ಅಧ್ಯಕ್ಷ ವಸಂತ ಕುಮಾರ್ ಅಧ್ಯಕ್ಷತೆ ವಹಿಸಿದರು. ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಝಡ್ ಎ ಕಯ್ಯಾರ್ ಸ್ವಾಗತಿಸಿ, ಅಸೀಸ್ ಕಳಾಯಿ ವಂದಿಸಿದರು. ಹಮೀದ್ ಕುಂಞಾಲಿ, ರಾಘವೇಂದ್ರ ಭಟ್, ಅಸೀಸ್ ಚೇವಾರು, ಸುಬ್ರಾಯ ಸಾಯ, ಅಬ್ದುಲ್ಲ ಹಾಜಿ, ಗಂಗಾಧರ ನಾಯ್ಕ, ನೌಷಾದ್ ಪಟ್ಲ, ರಾಮ ಭಟ್, ಜಕೀರ್ ಸಿರಂತಡ್ಕ, ಸತ್ತಾರ್ ಸಜಂಕಿಲ, ಹಮೀದ್ ಬಿ.ಎಂ, ಇಬ್ರಾಹಿಂ ಪದವು ನೇತೃತ್ವ ವಹಿಸಿದರು.