ಬಿಜೆಪಿ ಅಭ್ಯರ್ಥಿಯ ಮೂರನೇ ಹಂತದ ಮನೆ ಸಂಪರ್ಕ ಪೂರ್ಣ

ಉಪ್ಪಳ:  ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್‌ರ ಪ್ರಚಾರ ಕಾರ್ಯ ಭರದಿಂದ ನಡೆಯುತ್ತಿದ್ದು, ಮಂಜೇಶ್ವರ ಮಂಡಲದಲ್ಲಿ ನಿನ್ನೆ ೩ನೇ ಹಂತದ ಮನೆ ಸಂಪರ್ಕ ಪೂರ್ಣಗೊಂ ಡಿದೆ.  ಪುತ್ತಿಗೆ ಪಂಚಾಯತ್‌ನ ವಿವಿಧ ಪ್ರದೇಶಗಳಲ್ಲಿ ನಿನ್ನೆ ಕೆ. ಸುರೇಂದ್ರನ್ ಪ್ರಚಾರ ನಡೆಸಿದರು. ಅಲ್ಲದೆ ವಿವಿಧ ಕಾಲನಿ, ದೈವಸ್ಥಾನ, ದೇವಸ್ಥಾನಗಳಿಗೆ ಭೇಟಿ ನೀಡಿದರು. ಐಲ ಶ್ರೀ ದುರ್ಗಾಪರಮೇಶ್ವರಿ ಕಲಾ ಭವನದಲ್ಲಿ ನಡೆದ ಕೂಟ ಮಹಾಜಗತ್ತು  ಮಂಗಲ್ಪಾಡಿ ಅಂಗಸ್ಥೆಯ ಕೂಟ ಯುವಶಕ್ತಿ ಸಂಭ್ರಮ ಕಾರ್ಯಕ್ರಮದಲ್ಲಿ ಕೆ. ಸುರೇಂದ್ರನ್ ಭಾಗವಹಿಸಿದರು.

You cannot copy contents of this page