ಮದ್ಯ ಸಾಗಿಸುತ್ತಿದ್ದ ಕಾರು ರಸ್ತೆಯ ಚರಂಡಿಗೆ ಬಿದ್ದು ಅಪಘಾತ: ಚಾಲಕ ಸೆರೆ

ಉಪ್ಪಳ: ಕರ್ನಾಟಕದಿಂದ ಮದ್ಯ ಸಾಗಿಸುತ್ತಿದ್ದ ಕಾರು ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಚರಂಡಿಗಾಗಿ ತೆಗೆದ ಹೊಂಡಕ್ಕೆ ಬಿದ್ದು ಅಪಘಾತಕ್ಕೀಡಾಗಿದೆ.  ವಿಷಯ ತಿಳಿದು ಅಲ್ಲಿಗೆ ತಲುಪಿದ ಪೊಲೀ ಸರು   ಚಾಲಕನನ್ನು  ಸೆರೆಹಿಡಿದು ಕೇಸು ದಾಖಲಿಸಿಕೊಂಡಿದ್ದಾರೆ.

ನಿನ್ನೆ ರಾತ್ರಿ 11.20 ರ ವೇಳೆ ಉಪ್ಪಳ ಗೇಟ್ ಬಳಿ ಈ ಘಟನೆ ನಡೆದಿದೆ. ಕಾರಿನಿಂದ ಕರ್ನಾಟಕ ನಿರ್ಮಿತ 180 ಎಂಎಲ್‌ನ 1483 ಬಾಟ್ಲಿ ಮದ್ಯ, 90 ಎಂಎಲ್‌ನ 763 ಬಾಟ್ಲಿ ಮದ್ಯ ಪತ್ತೆಯಾಗಿದೆ. ಈ ಸಂಬಂಧ ಕಾರು ಚಾಲಕ ಕುಳೂರು ಚಾರ್ಲ ಕೆಮ್ಮಜಲು ನಿವಾಸಿ ಪ್ರಜ್ವಲ್ (೨೫) ಎಂಬಾತನನ್ನು  ಪೊಲೀಸರು ಬಂಧಿಸಿದ್ದಾರೆ.

ನಿನ್ನೆ ಮಂಗಳೂರಿನಿಂದ ಉಪ್ಪಳ ಭಾಗಕ್ಕೆ ಬರುತ್ತಿದ್ದ ಕಾರು ಉಪ್ಪಳ ಗೇಟ್ ಬಳಿ ರಸ್ತೆ ಬದಿಯ ಹೊಂಡಕ್ಕೆ ಬಿದ್ದಿತ್ತು. ಅಪಘಾತ ಸುದ್ದಿ ತಿಳಿದು ಮಂಜೇಶ್ವರ ಪೊಲೀಸ್ ಠಾಣೆಯ ಎಸ್‌ಐ ಉಮೇಶ್ ಕೆ.ಆರ್ ನೇತೃತ್ವದ ಪೊಲೀಸರು ತಕ್ಷಣ ಅಲ್ಲಿಗೆ ತೆರಳಿ ರಕ್ಷಣಾ  ಕಾರ್ಯಾಚಣೆಗೆ ನೇತೃತ್ವ ನೀಡಿದ್ದಾರೆ. ಕಾರನ್ನು ಕ್ರೇನ್ ಬಳಸಿ ಮೇಲಕ್ಕೆತ್ತಿದ್ದು ಬಳಿಕ ಕಾರಿನೊಳಗೆ ಪರಿಶೀಲಿಸಿದಾಗ ಮದ್ಯ ಪತ್ತೆಯಾಗಿದೆ. ಈ ಭಾಗದಲ್ಲಿ ಮಾರಾಟಗೈಯ್ಯಲು ಈ ಮದ್ಯವನ್ನು ಕರ್ನಾಟಕದಿಂದ ತರಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page