ನಗರದಲ್ಲಿ ಸಂಚರಿಸುತ್ತಿದ್ದ ಕಾರಿಗೆ ಬೆಂಕಿ: ಚಾಲಕ ಪಾರು

ಕಾಸರಗೋಡು: ಸಂಚರಿಸುತ್ತಿದ್ದ  ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಚಾಲಕ ಅದೃಷ್ಟವಶಾತ್ ಸಂಭಾವ್ಯ ಅನಾಹುತದಿಂದ ಪಾರಾದ ಘಟನೆ ನಗರದ ಪ್ರೆಸ್ ಕ್ಲಬ್ ಜಂಕ್ಷನ್ ಬಳಿ ಇಂದು ಮುಂಜಾನೆ 4 ಗಂಟೆಗೆ ನಡೆದಿದೆ.

ಚೆರ್ಕಳ ನಿವಾಸಿ ಅಬ್ದುಲ್ಲ ಎಂಬವರು ಕಾರಿನಲ್ಲಿ ಕಾಸರಗೋಡು ರೈಲು ನಿಲ್ದಾಣಕ್ಕೆ ಹೋಗುತ್ತಿದ್ದ ವೇಳ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಬ್ದುಲ್ಲ ತಕ್ಷಣ ಕಾರು ನಿಲ್ಲಿಸಿ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದರು. ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ. ಸುಕುಮಾರ ನೇತೃತ್ವದ ಕಾಸರಗೋಡು ಅಗ್ನಿಶಾಮಕದಳ ತಕ್ಷಣ  ಸ್ಥಳಕ್ಕೆ ದೌಡಾಯಿಸಿ  ಬೆಂಕಿ ನಂದಿಸಿದರು. ಕಾರಿನ ಒಂದು ಭಾಗ ಬಹುತೇಕ ಬೆಂಕಿಗಾಹುತಿಯಾಗಿದೆ. ಅಗ್ನಿಶಾಮಕದಳದ ಇತರ ಸಿಬ್ಬಂದಿ ಗಳಾದ ರಾಜೇಶ್, ಅಭಿಲಾಷ್, ಮೊಹಮ್ಮದ್ ಸಿರಾಜುದ್ದೀನ್, ಅರುಣಾ ಪಿ ನಾಯರ್, ಪ್ರಜೀಶ್, ಅನಂತು ಮತ್ತು ಶೈಜು  ಎಂಬವರು ರಕ್ಷಣಾ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಒಳಗೊಂಡಿದ್ದರು.

RELATED NEWS

You cannot copy contents of this page