ಕುಂಬಳೆ: ಕುಂಬಳೆ ಪಂಚಾಯತ್ನ ಕೊಡ್ಯಮ್ಮೆ ಜಮಾಅತ್ ಕಮಿಟಿ ಸದಸ್ಯನೂ, ಯು.ಎಚ್. ಕ್ಲಬ್ನ ಅಧ್ಯಕ್ಷನಾದ ಕೊಡ್ಯಮ್ಮೆಯ ಪಳ್ಳತ್ತಿಮಾರ್ ಮೂಸ ಅವರ ಪುತ್ರ ಜಲೀಲ್ ಕೊಡ್ಯಮ್ಮೆ ತನ್ನ ಹೆಸರಲ್ಲಿರುವ ೭ಸೆಂಟ್ಸ್ ಸ್ಥಳವನ್ನು ಹಿತ್ತಿಲಿಗೆ ಸೇರಿಕೊಂಡಿರುವ ಬನಕ್ಕಾಗಿ ಉಚಿತವಾಗಿ ನೀಡಿದ್ದಾರೆ. ಜಲೀಲ್ ರ ಪ್ರಾಮಾಣಿಕತೆಯನ್ನು ಬನ ಸಮಿತಿ ಹಾಗೂ ನಾಗರಿಕರು ಅಭಿನಂದಿಸಿದ್ದಾರೆ. ಬನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಕ್ಷಾಧಿಕಾರಿಗಳಾದ ದಾಸ್ ಹಾಗೂ ಕುಟುಂಬ ಗೌರವಿಸಿದರೂ ಬನ ಸಮಿತಿ ಸದಸ್ಯರು ಜಲೀಲ್ರಿಗೆ ಪಾರಿತೋಷಕ ನೀಡಿದರು. ನಾಡಿನಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಜೀವ ಕಾರುಣ್ಯ ಚಟುವಟಿಕೆಗಳಲ್ಲಿ ಜಲೀಲ್ ಸಕ್ರಿಯರಾಗಿದ್ದಾರೆ.







