ಸೀತಾಂಗೋಳಿ: ಶಾಸಕರ ಆಸ್ತಿ ಅಭಿವೃದ್ಧಿ ನಿಧಿಯಿಂದ 17 ಲಕ್ಷ ರೂ. ವೆಚ್ಚಮಾಡಿ ನಿರ್ಮಿಸಿದ ಪುತ್ತಿಗೆ ಪಂಚಾಯತ್ನ ಸೀತಾಂಗೋಳಿ-ಮದನಡ್ಕ-ಕಾವೇರಿಕಾನ ರಸ್ತೆಯ ಉದ್ಘಾಟನೆಯನ್ನು ಶಾಸಕ ಎಕೆಎಂ ಅಶ್ರಫ್ ನಿರ್ವಹಿಸಿದರು. ಪಂ. ಅಧ್ಯಕ್ಷ ಸುಬ್ಬಣ್ಣ ಆಳ್ವ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷೆ ಜಯಂತಿ, ಸದಸ್ಯರಾದ ಕಾವ್ಯ,ಅನಿತ, ಆಸಿಫಲಿ ಕಂದಲ್, ಪ್ರೇಮ, ಕೇಶವ ಪುತ್ತಿಗೆ, ವಿವಿಧ ರಾಜಕೀಯ, ಸಾಮಾಜಿಕ ಪ್ರತಿನಿಧಿಗಳಾದ ಅಬ್ದುಲ್ಲ ಕಂಡತ್ತಿಲ್, ಸುಲೈಮಾನ್ ಊಜಂಪದವು, ಇ.ಕೆ.ಮುಹಮ್ಮದ್ ಕುಂಞಿ, ಶಾನಿದ್ ಕಯ್ಯಾಂಕೂಡಲ್, ಚಂದ್ರನ್ ಕಟ್ಟತ್ತಡ್ಕ, ಸ್ಟಾನಿ ಡಿ’ಸೋಜಾ, ಸವಾದ್ ಅಂಗಡಿಮೊ ಗರು, ಕುಂಞು ಕಯ್ಯಾಂಕೂಡಲ್, ರಫೀಕ್, ಕಿಶೋರ್ ಭಾಗವಹಿಸಿದರು.







