ಕೆಎಸ್‌ಆರ್‌ಟಿಸಿ- ಬೈಕ್ ಢಿಕ್ಕಿ: ಹೊಡೆದು ಖಾಸಗಿ ಬಸ್ ಚಾಲಕ ಮೃತ್ಯು

ಹೊಸದುರ್ಗ: ಚಿತ್ತಾರಿಕಲ್ ಕುನ್ನುಂಗೈಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ಮಧ್ಯೆ ಉಂಟಾದ ಅಪಘಾತದಲ್ಲಿ ಯುವಕ ಮೃತಪಟ್ಟಿದ್ದಾರೆ. ಕಾಞಂಗಾಡ್ ಚೆರುವತ್ತೂರು- ಚೀಮೇನಿ ರೂಟ್ ನಲ್ಲಿ ಸಾಗುವ ಖಾಸಗಿ ಬಸ್‌ನ ಚಾಲಕನಾಗಿರುವ ಕುನ್ನುಂಗೈ ಮುಳ್ಳಿಕ್ಕಾಡ್ ನಿವಾಸಿ ಪ್ರವೀಣ್ (28) ಮೃತಪಟ್ಟ ಯುವಕ. ನಿನ್ನೆ ಸಂಜೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.

You cannot copy contents of this page