ಬಿಜೆಪಿ ಹಲ್ಲೆ ಆರೋಪಿಸಿ ಎಂಎಸ್‌ಎಫ್ ಪ್ರತಿಭಟನೆ

ಕಾಸರಗೋಡು: ಬದಿಯಡ್ಕ ಪೇಟೆಯಲ್ಲಿ ಎಂಎಸ್‌ಎಫ್ ಕಾಸರಗೋಡು ವಿಧಾನಸಭಾ ಮಂಡಲ ಪ್ರಧಾನ ಕಾರ್ಯದರ್ಶಿ ಸಿರಾಜ್ ಬದಿಯಡ್ಕ ಸಹಿತವಿರುವ ನಾಲ್ಕು ಎಂಎಸ್‌ಎಫ್ ಕಾರ್ಯಕರ್ತರನ್ನು ಬಿಜೆಪಿ ತಂಡ ವಿನಾಕಾರಣ ಹಲ್ಲೆಗೈದಿದೆ ಎಂದು ಆರೋಪಿಸಿ ಎಂಎಸ್‌ಎಫ್ ಕಾಸರಗೋಡು ವಿಧಾನಸಭಾ ಮಂಡಲ ಸಮಿತಿ ನಗರದಲ್ಲಿ ಪ್ರತಿಭಟನೆ ನಡೆಸಿದೆ. ರಾಜ್ಯ ಉಪಾಧ್ಯಕ್ಷ ಅನಸ್ ಎದುರ್ತೋಡು, ಸಲಾಂ ಬೆಳಿಂಜ, ಅಲ್ತಾಫ್ ಪೊವ್ವಲ್, ಶಾನಿಫ್ ನೆಲ್ಲಿಕಟ್ಟೆ, ಯೂಸುಫ್ ದಾರಿಮಿ, ಹಾಶಿರ್ ಮೊಯ್ದೀನ್, ಹಮೀದ್ ಕೆಡೆಂಜಿ, ಅರ್ಫಾತ್ ಕಂಬಾರ್, ಜಸಿಲ್ ತುರುತ್ತಿ, ಮುನ್ವರ್ ಫೈರೂಸ್, ರಾದಿನ್ ಅನ್ವಫ್ ನೇತೃತ್ವ ನೀಡಿದರು.

You cannot copy contents of this page