ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಟೋಲ್ ಬೂತ್ಗೆ ಹಾನಿಗೈದು 10 ಲಕ್ಷ ರೂಪಾಯಿಯ ನಷ್ಟ ಉಂಟಾಯಿ ತೆಂಬ ಪ್ರಕರಣದಲ್ಲಿ ರಿಮಾಂಡ್ ನಲ್ಲಿರುವ ಇಬ್ಬರನ್ನು ನ್ಯಾಯಾಲಯ ಜಾಮೀನಿನಲ್ಲಿ ಬಿಡುಗಡೆಗೊಳಿಸಿದೆ. ಕೊಡ್ಯಮ್ಮೆ ಊಜಾರಿನ ಫೈಸಲ್ ಅಬ್ದುಲ್ ರಹಿಮಾನ್ (28), ಮಂಜೇಶ್ವರ ವಾಮಂಜೂರಿನ ಟಿ.ಅಬ್ದುಲ್ ನಾಸರ್ (46) ಎಂಬಿವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಜಾಮೀನು ಲಭಿಸಿದ ಇವರನ್ನು ಕಾಸರಗೋಡು ಸಬ್ ಜೈಲು ಪರಿಸರದಿಂದ ಮುಷ್ಕರ ಸಮಿತಿ ಪದಾಧಿಕಾರಿಗಳು ಶಾಲು ಹೊದಿಸಿ ಸ್ವಾಗತಿಸಿದರು.







