ನಿವೃತ್ತ ಪೋಸ್ಟ್ ಮಾಸ್ಟರ್ ನಿಧನ

ಬೆಳ್ಳೂರು: ಕರ್ಕಟಗೋಳಿ ನಿವಾಸಿ ನಿವೃತ್ತ ಪೋಸ್ಟ್ ಮಾಸ್ಟರ್ ಕೃಷ್ಣ ನಾಯ್ಕ (70) ನಿಧನ ಹೊಂದಿದರು. ಇವರು ಮುಳ್ಳೇರಿಯ, ನೆಟ್ಟಣಿಗೆ, ಕುಂಬಳೆ, ಪೈವಳಿಕೆ, ಉಪ್ಪಳ ಮೊದಲಾದ ಕಡೆಗಳಲ್ಲಿ ಪೋಸ್ಟ್ ಮಾಸ್ಟರ್ ಆಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಶಾರದ, ಮಕ್ಕಳಾದ ಮಹೇಶ್, ಮನೋಜ್, ಪ್ರದೀಪ್, ಸೊಸೆಯಂದಿರಾದ ಶಾರದ, ಸುಪ್ರೀತ, ಜಯಂತಿ, ಸಹೋದರರಾದ ದಿವಾಕರ, ಅಣ್ಣು ನಾಯ್ಕ್, ಗಂಗಾಧರ, ನಾರಾಯಣ, ಸಹೋದರಿ ಸರಸ್ವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page