ಪುತ್ತಿಗೆ: ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ರ ಇಪ್ಪತ್ತನೇ ವರ್ಷದ ಉರೂಸ್ ಹಾಗೂ ಸನದುದಾನ ಸಮ್ಮೇಳನ ಜನವರಿ 29ರಿಂದ 31ರ ವರೆಗೆ ನಡೆಯಲಿದೆ. ಕೇರಳ ಮುಸ್ಲಿಂ ಜಮಾಯತ್ ಜಿಲ್ಲಾ ಅಧ್ಯಕ್ಷ ಹಸನುಲ್ ಅಹ್ದ್ ತಂಙಳ್ ಈ ಬಗ್ಗೆ ಘೋಷಿಸಿದ್ದಾರೆ. ಪ್ರಧಾನ ಕಾರ್ಯದರ್ಶಿ ಬಿ.ಎಸ್. ಅಬ್ದುಲ್ಲ ಫೈಸಿ ಅಧ್ಯಕ್ಷತೆ ವಹಿಸಿದರು. ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ ಉದ್ಘಾಟಿಸಿದರು. ಹಲವರು ಮಾತನಾಡಿದರು.







