ಕೇರಳ ಸಂಸ್ಕೃತ ಶಿಕ್ಷಕರ ಫೆಡರೇಶನ್ ಜಿಲ್ಲಾ ಸಮ್ಮೇಳನ

ಕಾಸರಗೋಡು: ಕೇರಳ ಸಂಸ್ಕೃತ ಶಿಕ್ಷಕರ ಒಕ್ಕೂಟದ ಕಾಸರಗೋಡು ಜಿಲ್ಲಾ ಸಮ್ಮೇಳನ ಕಾಸರಗೋಡು ಬಿಇಎಂ ಶಾಲೆಯಲ್ಲಿ ನಡೆಯಿತು. ಜಿಲ್ಲಾಧ್ಯಕ್ಷ ಹರಿಕುಮಾರ್ ಇ.ಎ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಪುರಸಭೆ ಉಪಾಧ್ಯಕ್ಷ ಕೆ.ಎಂ. ಹನೀಫ್ ಉದ್ಘಾಟಿಸಿದರು.
ಸೇವೆಯಿಂದ ನಿವೃತ್ತರಾಗುತ್ತಿರುವ ರಮಾನಂದ ಮಾಸ್ಟರ್‌ರನ್ನು ಅಭಿನಂದಿಸಲಾಯಿತು. ರಾಜ್ಯ ಕಾರ್ಯದರ್ಶಿ ಅರುಣ್ ಕುಮಾರ್ ಮುಖ್ಯ ಭಾಷಣ ಮಾಡಿದರು. ರಾಜ್ಯ ಉಪಾಧ್ಯಕ್ಷ ನೀಲಮನ ಶಂಕರನ್ ಮಾಸ್ಟರ್, ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ ಜಸೀತಾ ಕೆ.ಕೆ, ಟಿ.ಪಿ. ಪದ್ಮಕುಮಾರ್, ಮಧು ಕೆ, ಪ್ರಸೀತಾ ಕೆ.ಸಿ, ಮನೋಜ್ ಕುಮಾರ್, ನೀಲಮನ ಉಮಾ, ಮಧು ಶ್ಯಾಮ್ ಮತ್ತು ವೆಂಕಟಕೃಷ್ಣ ಭಟ್ ಮಾತನಾಡಿದರು.
ಕೆ. ಎಸ್.ಟಿ.ಎಫ್ (ಖಾಸಗಿ ವಿಭಾಗ) ಅಧ್ಯಕ್ಷೆಯಾಗಿ ಪ್ರಸೀದಾ ಕೆ.ಸಿ., ಕಾರ್ಯದರ್ಶಿಯಾಗಿ ಅರುಣ್ ಕುಮಾರ್, ಕೆ. ಎಸ್.ಟಿ.ಎಫ್ (ಇಲಾಖೆ) ಅಧ್ಯಕ್ಷರಾಗಿ ಪರಮೇಶ್ವರನ್ ಎಚ್, ಕಾರ್ಯದರ್ಶಿಯಾಗಿ ನೀಲಮನ ಉಮಾ, ಖಜಾಂಚಿಯಾಗಿ ವೆಂಕಟಕೃಷ್ಣ ಭಟ್‌ರನ್ನು ಆರಿಸಲಾಯಿತು.

RELATED NEWS

You cannot copy contents of this page