ಕಾಸರಗೋಡು: ತೆಕ್ಕಿಲ್ ರಾಷ್ಟ್ರೀಯ ಹೆದ್ದಾರಿ ಬದಿಯ ತೋಡಿಗೆ ಮಲಿನ ಜಲವನ್ನು ಹರಿಸಲು ತಲುಪಿದ ಟ್ಯಾಂಕರ್ ಲಾರಿ ಚಾಲಕನನ್ನು ಮೇಲ್ಪರಂಬ ಪೊಲೀಸರು ಸೆರೆ ಹಿಡಿದರು. ಮಲಿನ ಜಲ ಸಹಿತ ತಲುಪಿದ ಲಾರಿಯನ್ನು ಕಸ್ಟಡಿಗೆ ತೆಗೆದಿದ್ದಾರೆ. ಉಪ್ಪಳ ಮುಳಿಂಜ ನಿವಾಸಿ ಅಬ್ದುಲ್ ರಹ್ಮಾನ್ (34)ನನ್ನು ಸೆರೆ ಹಿಡಿಯಲಾಗಿದೆ. ಆದಿತ್ಯ ವಾರ ರಾತ್ರಿ 11 ಗಂಟೆಗೆ ಲಾರಿ ಯಿಂದ ಮಲಿನ ಜಲವನ್ನು ಉಪೇಕ್ಷಿಸುವುದನ್ನು ಕಂಡ ಸ್ಥಳೀ ಯರಲ್ಲಿ ಓರ್ವ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಇನ್ಸ್ಪೆಕ್ಟರ್ ಎನ್.ಪಿ. ರಾಘವನ್ರ ನೇತೃತ್ವದಲ್ಲಿ ಮೇಲ್ಪ ರಂಬ ಪೊಲೀಸರು ಸ್ಥಳಕ್ಕೆ ತಲುಪಿ ದ್ದರು. ಲಾರಿಯಿಂದ ಪೈಪ್ ಮೂಲಕ ತೋಡಿಗೆ ಮಲಿನ ಜಲ ಹರಿಯಬಿಡುವುದನ್ನು ಕಂಡ ಪೊಲೀಸರು ವಾಲ್ವ್ ಆಫ್ ಮಾಡಲು ಚಾಲಕನಿಗೆ ಸೂಚಿಸಿ ದರು. ಈತನನ್ನು ಪ್ರಶ್ನಿಸಿದಾಗ ಬೇಕಲದ ಒಂದು ಹೋಟೆಲ್ನಿಂದ ಮಲಿನ ಜಲವನ್ನು ತಂದಿರುವುದಾಗಿ ಚಾಲಕ ಒಪ್ಪಿಕೊಂಡಿದ್ದಾನೆ. ಅನಧಿಕೃತವಾಗಿ ಮಲಿನ ಜಲವನ್ನು ಸಾಗಿಸಿದ್ದು, ಅಪಾಯಕರವಾದ ರೋಗಗಳು ಹರಡಬಹುದೆಂಬ ಅರಿವಿದ್ದು ತೋಡಿಗೆ ಮಲಿನ ಜಲವನ್ನು ಹರಿಯಬಿಟ್ಟಿರುವುದಕ್ಕೆ ಚಾಲಕನ ವಿರುದ್ಧ ಕೇಸು ದಾಖಲಿಸಲಾಗಿದೆ. ಬಳಿಕ ಈತನಿಗೆ ನೋಟೀಸ್ ನೀಡಿ ಬಿಡುಗಡೆಗೊಳಿಸಲಾಯಿತು.







