ಮುಳ್ಳೇರಿಯ: ಮುಳ್ಳೇರಿಯ ಕುಟುಂಬಾರೋಗ್ಯ ಕೇಂದ್ರದ ಆವರಣದೊಳಗೆ ಅತಿಕ್ರಮಿಸಿ ನುಗ್ಗಿ ಮರ ಕಡಿದು ಸಾಗಿಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ನೌಕರನಾದ ಎಸ್.ಎಂ .ಸಾಜಿರ್ ನೀಡಿದ ದೂರಿ ನಂತೆ ಮುಳ್ಳೇರಿಯದ ಉದಯನ್ ಎಂಬಾತನ ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ಕಳೆದ ಮಂಗಳವಾರ ಸಂಜೆ 5 ಗಂಟೆಯಿಂದ ಬುಧವಾರ ಬೆಳಿಗ್ಗೆ 10 ಗಂಟೆ ಮಧ್ಯೆ ಕುಟುಂಬಾರೋಗ್ಯ ಕೇಂದ್ರದ ಸ್ಥಳಕ್ಕೆ ನುಗ್ಗಿ ಮರ ಕಡಿದು ಸಾಗಿಸಿರುವುದಾಗಿಯೂ ಇದರಿಂದ 15 ಸಾವಿರ ರೂ.ಗಳ ನಷ್ಟ ವುಂಟಾಗಿ ರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.






