ಅಗ್ನಿಶಾಮಕ ದಳದಿಂದ ಬಾವಿಯೊಳಗೆ ಸಿಲುಕಿದ ವ್ಯಕ್ತಿಯ ರಕ್ಷಣೆ

ಕಾಸರಗೋಡು: ಶುಚೀ ಕರಣಕ್ಕಾಗಿ ಐವತ್ತು ಅಡಿ ಆಳದ ಬಾವಿಗೆ ಇಳಿದು ಕೆಲಸ ಮುಗಿಸಿದ ಬಳಿಕ ಮೇಲಕ್ಕೇರುವ ವೇಳೆ ಜಾರಿ ನೀರಿಗೆ ಬಿದ್ದು ಸಿಲುಕಿಕೊಂಡಿದ್ದ ವ್ಯಕ್ತಿಯನ್ನು ಕಾಸರಗೋಡು ಅಗ್ನಿಶಾಮಕ ದಳ ಮೇಲಕ್ಕೆತ್ತಿ ರಕ್ಷಿಸಿದ ಘಟನೆ ನಗರದ ಅಣಂಗೂರಿನಲ್ಲಿ ನಡೆದಿದೆ.

ಅಣಂಗೂರು ಆರಾಫಾ ರಸ್ತೆಯ ಕೊಲ್ಲಂಪಾಡಿ ಹೌಸಿನ ಅಶ್ರಫ್ (೪೦) ಎಂಬವರು ನಿನ್ನೆ ಬೆಳಿಗ್ಗೆ ತಮ್ಮ ಮನೆಯ ೫೦ ಅಡಿ ಆಳದ ಬಾವಿ ಶುಚೀಕರಿಸಲೆಂದು ಇಳಿದಿದ್ದರು. ನಂತರ ಮೇಲ ಕ್ಕೇರುವಾಗ ಹಗ್ಗದಿಂದ ಕೈ ಜಾರಿ ಕೆಳಕ್ಕೆ ಬಿದ್ದು ಬಾವಿಯೊಳಗೆ ಸಿಲುಕಿಕೊಂಡರು. ಈ ಬಗ್ಗೆ ಮನೆಯವರು ನೀಡಿದ ಮಾಹಿತಿಯಂತೆ ಅಸಿಸ್ಟೆಂಟ್ ಸ್ಟೇಷನ್ ಆಫೀಸರ್ ಸಂತೋಷ್ ಕುಮಾರ್ ಕೆ.ವಿಯವರ ನೇತೃತ್ವದ ಕಾಸರಗೋಡು ಅಗ್ನಿಶಾಮಕ ದಳದವರು ಸ್ಥಳಕ್ಕೆ ಅಗಮಿಸಿ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಜೀವನ್ ಟಿ.ಜಿ. ಬಾವಿಗೆ ಇಳಿದು ಅಶ್ರಫ್‌ರನ್ನು ರಕ್ಷಿಸಿ, ಅಗ್ನಿಶಾಮಕ ದಳದ ಇತರ ಸಿಬ್ಬಂದಿಗಳ ಸಹಾಯದಿಂದ ಮೇಲಕ್ಕೆತ್ತಿ ಪ್ರಾಣ ಉಳಿಸಿದರು.

Leave a Reply

Your email address will not be published. Required fields are marked *

You cannot copy content of this page