ಅಡೂರು ಮೃತದೇಹ ಪತ್ತೆ ಪ್ರಕರಣ: ಡಿಎನ್ಎ ತಪಾಸಣೆಗೆ ನಿರ್ಧಾರ
ಮುಳ್ಳೇರಿಯ: ಅಡೂರು ಬೆಳ್ಳಚ್ಚೇರಿ ಗುಳಿಗನಮೂಲೆ ಎಂಬಲ್ಲಿ ಕಾಡಿನಲ್ಲಿ ಪತ್ತೆಯಾದ ಮೃತದೇಹ ಯಾರದ್ದೆಂದು ತಿಳಿದುಬಂದಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಮೊನ್ನೆ ಸಂಜೆ ವೇಳೆ ಪತ್ತೆಯಾದ ಮೃತದೇಹ ಜೀರ್ಣಿಸಿದ ಸ್ಥಿತಿಯಲ್ಲಿತ್ತು. ಸಮೀಪದ ಮರದ ರೆಂಬೆಯಲ್ಲಿ ಬಟ್ಟೆ ನೇತಾಡಿಸಿದ ಸ್ಥಿತಿಯಲ್ಲಿ ಕಂಡುಬಂದಿ ದ್ದು, ಈ ಹಿನ್ನೆಲೆಯಲ್ಲಿ ನೇಣು ಬಿಗಿದು ಸಾವಿಗೀಡಾರಬಹುದೆಂದು ಅಂದಾಜಿಸಲಾಗಿದೆ.
ಮೃತದೇಹ ಯಾರದ್ದೆಂದು ತಿಳಿಯಲು ಡಿಎನ್ಎ ತಪಾಸಣೆ ನಡೆಸಬೇಕಾಗಿ ಬರಲಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ಅರ್ಜಿ ಸಲ್ಲಿಸಿದ್ದಾರೆ. ಇದೇ ವೇಳೆ ಮೃತದೇಹ ಸ್ಥಳದಿಂದ ನಾಪತ್ತೆಯಾದ ಪತ್ತನಂತಿಟ್ಟ ನಿವಾಸಿಯಾದ ಟ್ಯಾಪಿಂಗ್ ಕಾರ್ಮಿಕನದ್ದಾಗಿರ ಬಹುದೇ ಎಂಬ ಸಂಶಯ ಮೂಡಿದೆ. ಈ ಬಗ್ಗೆ ಆತನ ಸಂಬಂಧಿಕರನ್ನು ಪೊಲೀಸರು ಆದೂರಿಗೆ ಕರೆಸಿದ್ದಾರೆ.