ಅಯೋಧ್ಯೆಗೆ ಕರಸೇವಕರ ಪ್ರಯಾಣ ರೈಲು ನಿಲ್ದಾಣದಲ್ಲಿ ಬೀಳ್ಕೊಡುಗೆ

ಕಾಸರಗೋಡು: ಅಯೋಧ್ಯೆಯ ಶ್ರೀ ರಾಮ ಕ್ಷೇತ್ರಕ್ಕೆ ತೆರಳುವ ಜಿಲ್ಲೆಯಿಂದ ಪ್ರಯಾಣ ಆರಂಭಿಸಿದ ೬೪ ಕರಸೇವಕರಿಗೆ ರೈಲ್ವೇ ನಿಲ್ದಾಣದಲ್ಲಿ ಬೀಳ್ಕೊಡುಗೆ ನೀಡಲಾಯಿತು. ಕಾರ್ಯಕ್ರಮವನ್ನು ಪರಿಷತ್ ಪ್ರಚಾರಕ್ ಸಿ.ಎಚ್. ರಮೇಶ್ ಉದ್ಘಾಟಿಸಿದರು. ನಗರಸಭಾ ವಿಪಕ್ಷ ಮುಖಂಡ ಪಿ. ರಮೇಶ್, ಜಿಲ್ಲಾ ಕಾರ್ಯವಾಹ್ ಅಕ್ಷಯ್ ಬಾಬು, ಉದುಮ ಖಂಡ್ ಕಾರ್ಯವಾಹ್ ನಾಗೇಶ್ ಭಾಗವಹಿಸಿದರು. ರಾಮಕ್ಷೇತ್ರ ನಿರ್ಮಾಣ ಸಂಬಂಧಿಸಿ ೧೯೮೯, ೯೦, ೯೨ರ ಕಾಲ ಘಟ್ಟಗಳಲ್ಲಿ ಕರಸೇವೆಯಲ್ಲಿ ಭಾಗವಹಿಸಿದ ಜಿಲ್ಲೆಯ ಕಾರ್ಯಕರ್ತರಾಗಿದ್ದಾರೆ ಪ್ರಯಾಣ ಹೊರಟವರು. ನಿನ್ನೆ ಪ್ರತ್ಯೇಕ ರೈಲಿನಲ್ಲಿ ಅವರು ಕಾಸರಗೋಡಿನಿಂದ ಪ್ರಯಾಣ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page