ಅಸೌಖ್ಯದಿಂದ ಬಳಲುತ್ತಿದ್ದ ಯುವತಿ ಸಾವು

ಕಾಸರಗೋಡು: ಅಸೌಖ್ಯದಿಂದ ಚಿಕಿತ್ಸೆಯಲ್ಲಿದ್ದ ಯುವತಿ ಚಿಕಿತ್ಸೆ ಫಲ ಕಾರಿಯಾಗದ ಸಾವನ್ನಪ್ಪಿದ್ದಾರೆ. ಹೊಸದುರ್ಗ ರಾವಣೀಶ್ವರಂ ಅನ್ನಾಡಿ ವಳಪ್ಪಿಲ್ ಸಿ.ಕೆ. ನಾರಾಯಣನ್‌ರ ಪತ್ನಿ ಪ್ರಸನ್ನ ಕುಮಾರಿ (45) ಸಾವನ್ನಪ್ಪಿದ ಯುವತಿ. ಇವರ ಚಿಕಿತ್ಸೆಗಾಗಿ ಚಿಕಿತ್ಸಾ ಸಮಿತಿಗೆ ರೂಪು ನೀಡಿ ನಿಧಿ ಸಂಗ್ರಹಿಸಲಾಗಿದೆ. ಅದರ ಮೊದಲೇ ಅವರು ಸಾವನ್ನಪ್ಪಿದ್ದಾರೆ. ಮೃತರು ಮಕ್ಕಳಾದ ನಂದನ ನಾರಾಯಣನ್, ನವನೀತ ನಾರಾಯಣನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page