ಆರಿಕ್ಕಾಡಿ ಕೋಟೆಯೊಳಗೆ ಬೆಂಕಿ ಆಕಸ್ಮಿಕ

ಕುಂಬಳೆ: ತಂಡವೊಂದು ನಿಧಿ ಶೋಧ ನಡೆಸಿದ ಆರಿಕ್ಕಾಡಿ ಕೋಟೆಯಲ್ಲಿ ನಿನ್ನೆ ಸಂಜೆ ಬೆಂಕಿ ಹತ್ತಿಕೊಂಡ ಘಟನೆ ನಡೆದಿದೆ. ವಿಷಯ ತಿಳಿದು ತಲುಪಿದ ಪೊಲೀ ಸ್, ಅಗ್ನಿಶಾಮಕದಳ, ನಾಗರಿಕರ ಸಹಾಯದಿಂದ ಬೆಂಕಿ ನಂದಿಸಿದೆ. ಬೆಂಕಿ ಹೇಗೆ ಹತ್ತಿಕೊಂಡಿದೆಯೆಂದು ತಿಳಿದು ಬಂದಿಲ್ಲ.

ಈ ಮೊದಲು ಕೋಟೆಯೊಳಗೆ ಕಾಡು ತುಂಬಿಕೊಂ ಡಿದ್ದುದರಿಂದ ಅದರೊಳಗೆ ನಡೆಯುತ್ತಿದ್ದ ಯಾವುದೇ ಚಟುವಟಿಕೆ ಹೊರಗೆ  ತಿಳಿ ಯುತ್ತಿರಲಿಲ್ಲ. ಇದೀಗ ಕಾಡು ಬೆಂಕಿಗಾಹುತಿಯಾದುದರಿಂದ ಕೋಟೆಯೊಳಗೆ ಇನ್ನು ಮುಂದೆ ನಡೆಯುವ ಚಟುವಟಿಕೆ ಕೂಡಲೇ ತಿಳಿದು ಬರಲಿದೆಯೆಂದು ನಾಗರಿ ಕರು ತಿಳಿಸುತ್ತಿದ್ದಾರೆ.

You cannot copy contents of this page