ಉಷ್ಣತೆ: ಮಧ್ಯಾಹ್ನ 12ರಿಂದ 3 ಗಂಟೆ ವರೆಗೆ ಬಿಸಿಲಿಗೆ ಕೆಲಸ ನಿರ್ವಹಿಸದಂತೆ ನಿರ್ದೇಶ

ಕಾಸರಗೋಡು:  ರಾಜ್ಯದಲ್ಲಿ ಉಷ್ಣತೆ ಮಟ್ಟ ಹೆಚ್ಚಿರುವುದರಿಂದ ಸೂರ್ಯನ ತಾಪ ಉಂಟಾಗುವ ಸಾಧ್ಯತೆ ಇದೆ. ಇದರಿಂದ ಬಿಸಿಲಿಗೆ ಕೆಲಸ ನಿರ್ವಹಿಸುವ ಕಾರ್ಮಿಕರ ಕೆಲಸದ ಸಮಯ ನಿಗದಿಪಡಿ ಸಲಾಗಿದೆ. ಬೆಳಿಗ್ಗೆ 7ರಿಂದ ಸಂಜೆ 7 ಗಂಟೆವ ರೆಗೆ 8 ಗಂಟೆ ಕೆಲಸದ ಸಮಯ ವಾಗಿದ್ದು, ಕಾರ್ಮಿಕರು ಮಧ್ಯಾಹ್ನ 12ರಿಂದ ಅಪರಾಹ್ನ 3 ಗಂಟೆ ವರೆಗೆ ವಿಶ್ರಾಂತಿ ಪಡೆಯಬೇಕಾಗಿದೆ. ಶಿಫ್ಟ್ ಮಧ್ಯಾಹ್ನ 12ಕ್ಕೆ ಕೊನೆಗೊಳಿಸಿ ಸಂಜೆ 3ಕ್ಕೆ ಆರಂಭಿಸುವ ರೀತಿಯಲ್ಲಿ ಕೆಲಸದ ಸಮಯ ನಿಗದಿಪಡಿಸಿರು ವುದಾಗಿ ಲೇಬರ್ ಕಮಿಶನರ್ ತಿಳಿಸಿದ್ದಾರೆ. ಮೇ 10ರ ವರೆಗೆ ಇದೇ ಸ್ಥಿತಿ ಮುಂದುವರಿಯಲಿದೆ.

You cannot copy contents of this page