ಎಕೆಪಿಎ ವೆಸ್ಟ್ ಯೂನಿಟ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ
ಕಾಸರಗೋಡು: ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇಶನ್ ವೆಸ್ಟ್ ಯೂನಿಟ್ ಇದರ ವತಿಯಿಂದ ವಿಶ್ವ ಪರಿಸರದಿನವನ್ನು ಕಾಸರಗೋಡು ಜನರಲ್ ಆಸ್ಪತ್ರೆ ಪರಿಸರದಲ್ಲಿ ಗಿಡ ನೆಡುವ ಮೂಲಕ ಆಚರಿಸಲಾಯಿತು. ಆಸ್ಪತ್ರೆ ಸುಪರಿಂಟೆಂಡೆಂಟ್ ಡಾ| ಶ್ರೀಕುಮಾರ್ ಮುಕುಂದನ್ ಗಿಡ ನೆಟ್ಟರು. ಯೂನಿಟ್ ಅಧ್ಯಕ್ಷ ವಂತ್ ಕೆರೆಮನೆ, ಎಕೆಪಿಎ ವಲಯ ಕೋಶಾಧಿಕಾರಿ ಮನು, ಯೂನಿಟ್ ನಿರೀಕ್ಷಕ ಶ್ರೀಜಿತ್, ಎಕೆಪಿಎ ಜಿಲ್ಲಾ ಸ್ಪೋರ್ಟ್ಸ್ ಕೋ-ಆರ್ಡಿನೇಟರ್ ರತೀಶ್, ವಲಯ ಸಮಿತಿ ಸದಸ್ಯ ಸುಬ್ರಹ್ಮಣ್ಯ ಎಂ.ಎಸ್, ಮೈಂದಪ್ಪ, ಸಾಂತ್ವನ ಕೋ-ಆರ್ಡಿನೇಟರ್ ಶಾಲಿನಿ ರಾಜೇಂದ್ರನ್, ವಾಸು ಎ, ಸಮಿತಿ ಸದಸ್ಯ ಚಂದ್ರಶೇಖರ ಎಂ, ಆಸ್ಪತ್ರೆಯ ನರ್ಸಿಂಗ್ ಸುಪರಿಂಟೆಂಡೆಂಟ್ ಲತಾ ಎಂ, ಶೆಲ್ಜಿ ಮೋಳ್, ರಾಧಾಕೃಷ್ಣನ್, ಸೆಲ್ಮಾ, ಆಸ್ಪತ್ರೆ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು. ಯೂನಿಟ್ ಕಾರ್ಯದರ್ಶಿ ವಿಶಾಖ್ ಸ್ವಾಗತಿಸಿ, ಕೋಶಾಧಿಕಾರಿ ಗಣೇಶ್ ರೈ ವಂದಿಸಿದರು.