ಕಾಸರಗೋಡು ಗಣೇಶೋತ್ಸವ: ಸ್ವಾಗತ ಸಮಿತಿ ರೂಪೀಕರಣ; ಎಡನೀರು ಶ್ರೀ ಉದ್ಘಾಟನೆ
ಕಾಸರಗೋಡು: ಸ್ವಾತಂತ್ರ್ಯ ಸಂಗ್ರಾಮದ ವೇಳೆ ಹಿಂದೂ ಸಮಾಜವನ್ನು ಒಗ್ಗೂಡಿಸಲು 1893ರಲ್ಲಿ ಬಾಲಗಂಗಾಧರ ತಿಲಕರು ಗಣೇಶೋತ್ಸವವನ್ನು ಆರಂಭಿಸಿದ್ದರು. ಇಂದು ನಮ್ಮ ದೇಶದಲ್ಲಿ ನಡೆಯುವ ಆಗುಹೋಗು ಗಳಿಂದಾಗಿ ದೇಶದಲ್ಲಿ ಗಣೇಶೋ ತ್ಸವದ ಪರಿಕಲ್ಪನೆ ಮತ್ತೆ ಅನಿವಾ ರ್ಯವಾಗಿದೆಯೆಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನುಡಿದರು.
ಕಾಸರಗೋಡು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಅಗೋಸ್ತ್ 27ರಿಂದ ಸೆ. 6ರ ತನಕ ನಡೆಯುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಪ್ತತಿ ಮಹೋತ್ಸವದ ಸ್ವಾಗತ ಸಮಿತಿ ರೂಪೀಕರಣ ಸಭೆಯನ್ನು ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ವಠಾರದಲ್ಲಿ ನಿನ್ನೆ ದೀಪ ಬೆಳಗಿಸಿ ಉದ್ಘಾಟಿಸಿದ ಬಳಿಕ ಅವರು ಆಶೀರ್ವಚನಗೈದು ಮಾತನಾಡಿದರು. ನಮ್ಮಲ್ಲಿ ಏನೇ ಭಿನ್ನಾಭಿಪ್ರಾಯ ವಿದ್ದರೂ ಸನಾತನ ಹಿಂದೂ ಧರ್ಮಕ್ಕೆ ಧಕ್ಕೆಯಾಗಬಾರದು. ಇಲ್ಲಿ ನಡೆಯಲಿರುವ ಸಪ್ತತಿ ಕಾರ್ಯಕ್ರಮವು ಕೇವಲ ಗಣೇಶೋತ್ಸವವಾಗಿರದೆ ಇದು ಮಹಾಸಂಗಮ ಕಾರ್ಯಕ್ರಮ ವಾಗಬೇಕು ಮತ್ತು ಐತಿಹಾಸಿಕ ಕಾರ್ಯಕ್ರಮವಾಗಬೇಕು. ಸನಾತನ ಹಿಂದೂ ಧರ್ಮವು ಈ ದೇಶವನ್ನು ಬೆಳಗಿಸುವ ಕಾರ್ಯ ಮಾಡುತ್ತಿದೆಯೆಂದರು.ಚಿನ್ಮಯಾ ಮಿಷನ್ ಕೇರಳ ಘಟಕದ ಮುಖ್ಯಸ್ಥ ವಿವಿಕ್ತಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನಗೈದರು. ಹಿಂದೂ ಸಮಾಜವು ಹಲವಾರು ಸಮಸ್ಯೆಗಳನ್ನು ಇಂದು ಎದುರಿಸುತ್ತಿದೆ. ಆದುದರಿಂದ ಈ ಬಗ್ಗೆ ನಾವು ಸದಾ ಜಾಗರೂಕರಾಗಿರಬೇಕು. ಅದಕ್ಕಾಗಿ ನಾವು ನಮ್ಮ ಜಾತಿ, ಭಾಷೆಯನ್ನು ದೂರವಿರಿಸಬೇಕು. ಹಿಂದೂ ಎಂದರೆ ನಾವೆಲ್ಲರೂ ಒಂದು ಎಂಬ ಭಾವನೆ ನಮ್ಮಲ್ಲಿ ಸದಾ ಇರಬೇಕು ಎಂದರು.
ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಮಾತನಾಡಿ ಸಮಾಜದ ಒಗ್ಗಟ್ಟಿಗಾಗಿ ಈ ಕಾರ್ಯಕ್ರಮದ ಯಶಸ್ವಿಗಾಗಿ ನಾವೆಲ್ಲರೂ ಸ್ವಯಂ ಸೇವಕರಾಗಿ ಕಾರ್ಯವೆಸಗಬೇಕು ಎಂದರು.
ಆರ್ಎಸ್ಎಸ್ ಕಾಸರಗೋಡು ಜಿಲ್ಲಾ ಸಂಘ ಚಾಲಕ್ ಪ್ರಭಾಕರನ್ ಮಾಸ್ತರ್ ಮಾತನಾಡಿದರು. ಗಣೇಶೋತ್ಸವಕ್ಕೆ ಸೇವಾ ಮನೋಭಾವ ಕೂಡಾ ಇದೆ. ಈ ಉತ್ಸವದ ಮೂಲಕ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರನ್ನು ಉನ್ನತ ಮಟ್ಟಕ್ಕೇರಿಸುವ ಧ್ಯೇಯ ಕೂಡಾ ಇದೆ ಎಂದರು. ಗಣೇಶೋತ್ಸವ ಸಮಿತಿ ಅಧ್ಯಕ್ಷ ನ್ಯಾಯವಾದಿ ಪಿ. ಮುರಳೀಧರನ್ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಗೌರವಾಧ್ಯಕ್ಷ ಜಗನ್ನಾಥ ಸಮಿತಿಯ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಛಾಯಾಶ್ರೀ ಮತ್ತು ವೈಭವಿ ಪ್ರಾಥನೆ ಹಾಡಿದರು. ಕೆ.ಎನ್. ಕಮಲಾಕ್ಷನ್ ಸ್ವಾಗತಿಸಿ,ಕಮಲಾಕ್ಷ ಬೀರಂತಬೈಲು ವಂದಿಸಿದರು. ದೇವದಾಸ್ ನುಳ್ಳಿಪ್ಪಾಡಿ ನಿರೂಪಿಸಿದರು.