ಕುಂಬಳೆಯಲ್ಲಿ ದಿ| ಶಂಕರ ಆಳ್ವ ಸಂಸ್ಮರಣೆ

ಕುಂಬಳೆ: ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿ ವತಿಯಿಂದ ಶಂಕರ ಆಳ್ವ ಹೇರೂರು ಇವರ ೨೯ನೇ ವರ್ಷದ ಸಂಸ್ಮರಣೆ ಪಕ್ಷದ  ಕಚೇರಿಯಲ್ಲಿ ಜರಗಿತು. ಬಿಜೆಪಿ ದಕ್ಷಿಣ ವಲಯ ಅಧ್ಯಕ್ಷ ಸುಜಿತ್ ರೈ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕೌನ್ಸಿಲ್ ಸದಸ್ಯ ರವೀಂದ್ರನ್ ಶಂಕರ ಆಳ್ವರ ಬಗ್ಗೆ ಮಾತನಾಡಿದರು. ಬಿಜೆಪಿ ಮಂಡಲ ಉಪಾಧ್ಯಕ್ಷೆ ಪ್ರೇಮಲತಾ, ಮುಖಂಡರಾದ ಶಶಿಕುಮಾರ್, ಗೋಪಾಲಣ್ಣ, ಪ್ರೇಮಾ ಶೆಟ್ಟಿ ಕುಂಬಳೆ, ಮೋಹನ್ ಕೆ. ಬಂಬ್ರಾಣ, ಪ್ರೇಮಾವತಿ, ವಿದ್ಯಾ ಎನ್ ಪೈ, ಸುಲೋಚನಾ, ಅಜಿತ್ ಕುಮಾರ್, ಪ್ರೇಮಾವತಿ ಸಹಿತ ಹಲವರು ಮಾತನಾಡಿದರು.

Leave a Reply

Your email address will not be published. Required fields are marked *

You cannot copy content of this page