ಕೆರೆ ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು

ಕಾಸರಗೋಡು: ಕೆರೆ ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಚಿತ್ತಾರಿ ಆಸೀಸಿಯಾ ಅರೇಬಿಕ್ ಕಾಲೇಜಿನ ವಿದ್ಯಾರ್ಥಿ, ಹೊಸದುರ್ಗ ಪಾರಪಳ್ಳಿ ನಿವಾಸಿ ಮುಹಸ್ಸಿದ್ (೧೬) ಸಾವನ್ನಪ್ಪಿದ ದುರ್ದೈವಿ. ಈತ ನಿನ್ನೆ ಸಂಜೆ ಸ್ನೇಹಿತರೊಂದಿಗೆ ಚಿತ್ತಾರಿಯ ಮಸೀದಿ ಕೆರೆಯಲ್ಲಿ ಸ್ನಾನಕ್ಕಿಳಿದಾಗ ದಿಢೀರ್ ನೀರಿನಲ್ಲಿ ಮುಳುಗಿದ್ದಾನೆ. ಅದನ್ನು ಕಂಡ ಇತರರು ತಕ್ಷಣ ಆತನನ್ನು ನೀರಿನಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾ ಗಲಿಲ್ಲ. ಮೃತದೇಹವನ್ನು ನಂತರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೊ ಪಡಿಸಲಾಯಿತು.  ಈ ಬಾಲಕ ಮೂಲತಃ ಕೊಟ್ಟೋಡಿ ನಿವಾಸಿ ಯಾಗಿದ್ದು, ಬಳಿಕ  ಕುಟುಂಬ ಪಾರಾಪಳ್ಳಿಗೆ ವಾಸ ಬದಲಾಯಿಸಿತ್ತು.  ಮೃತ ಬಾಲಕ ಪಾರಪಳ್ಳಿ ಕಾಟ್ಟಿಪಾರದ ಕೌಲತ್ತ್ ಎಂಬವರ ಪುತ್ರನಾಗಿದ್ದಾನೆ. ಘಟನೆ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

RELATED NEWS

You cannot copy contents of this page