ಕೈಕಂಬ: ಹೆದ್ದಾರಿ ಬದಿಯಲ್ಲಿ ವಿದ್ಯುತ್ ಕೇಬಲ್ ಅಳವಡಿಸಲು ತೋಡಿದ ಹೊಂಡದಿಂದ ಅಪಾಯ

ಉಪ್ಪಳ: ಕೈಕಂಬ ಪೇಟೆಯ ಹೆದ್ದಾರಿ ಬದಿಯಲ್ಲಿ ವಿದ್ಯುತ್ ಕೇಬಲ್ ಅಳವಡಿಸಲು ತೋಡಿದ ಹೊಂಡ ಸಾರ್ವಜನಿಕರನ್ನು ಆತಂಕಕ್ಕೀಡುಮಾಡಿದೆ. ಈ ಪ್ರದೇಶದಲ್ಲಿ ದಿನನಿತ್ಯ ನೂರಾರು ಜನರ ಸಂಚಾರವಿದ್ದು ರಾತ್ರಿ ಹೊತ್ತಲ್ಲಿ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದು ಅನಾಹುತ ಸಂಭವಿಸಬಹುದಾಗಿದೆ. ಒಂದು ತಿಂಗಳ ಹಿಂದೆ ಹೊಂಡ ತೋಡಲಾ ಗಿದೆ. ವಿದ್ಯುತ್ ಕೇಬಲ್ ಅಳವಡಿಸಲಾದರೂ ಹೊಂಡ ಮುಚ್ಚದೆ ಬಿಟ್ಟಿರುವುದು ಅಧಿಕೃತರ ನಿರ್ಲಕ್ಷ÷್ಯವೆಂದು ಸಾರ್ವಜನಿಕರು ಆರೋಪಿಸಿದ್ದಾರೆ. ಹೊಂಡದಿAದ ಈ ಪರಿಸರದ ವ್ಯಾಪಾರ ಸಂಸ್ಥೆಗಳಿಗೆ ತೆರಳಲು ಕೂಡಾ ಸಮಸ್ಯೆಯÁಗಿರುವುದಾಗಿಯೂ ದೂರಲಾಗಿದೆ. ಕಳೆದ ಎರಡು ದಿನಗಳಿಂದ ಮಳೆ ಆರಂಭಗೆÆAಡಿದ್ದು, ಹೊಂಡದಲ್ಲಿ ನೀರು ತುಂಬಿಕೊAಡಲ್ಲಿ ಭಾರೀ ಅಪಾಯಕ್ಕೆ ಕಾರಣವಾಗಬಹುದಾಗಿದೆ. ಕೂಡಲೇ ಹೊಂಡವನ್ನು ಮುಚ್ಚಿ ಸಂಭವಿಸಬಹುದಾದ ಅಪಾಯವನ್ನು ತಪ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page