ಕೊಂಡೆವೂರಿನಲ್ಲಿ ಕೊರಗ ಸಮಾಜ ಸಂಗಮ ನಾಳೆ

ಉಪ್ಪಳ: ಕೊಂಡೆವೂರುಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ನಾಳೆ ಕಾಸರಗೋಡಿನ “ಕೊರಗ ಸಮಾಜ ಸಂಗಮ”ವನ್ನು ಆಯೋಜಿಸಲಾಗಿದೆ. ಉಪ್ಪಳದಿಂದ ಶೋಭಾಯಾತ್ರೆಯಲ್ಲಿ ಸಮಾಜ ಬಾಂಧವರು ಆಗಮಿಸಲಿದ್ದು ವಿವಿಧ ಸಮುದಾಯದ ಬಂಧುಗಳು ಅವರನ್ನು ಸ್ವಾಗತಿಸುವರು. 10.30 ಕ್ಕೆ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಯವರ ಉಪಸ್ಥಿತಿಯಲ್ಲಿ ರಾಜ್ಯಸಭಾ ಸದಸ್ಯ ಕೆ.ನಾರಾಯಣ್ ಸಮಾವೇಶವನ್ನು ಉದ್ಘಾಟಿಸುವರು. ವೇದಮೂರ್ತಿ ಅನಂತಪದ್ಮನಾಭ ಆಸ್ರಣ್ಣ, ಶಾಸಕ ಎ.ಕೆ.ಎಂ ಅಶ್ರಫ್, ಜಿ.ಪಂ. ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಡಿ.ವೈ.ಎಸ್.ಪಿ ಸತೀಶ್, ಟಿ.ಡಿ.ಓ ಮಲ್ಲಿಕಾ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕೊರಗ ಸಮಾಜ ಸಂಗಮ ಸಮಿತಿಯ ಅಧ್ಯಕ್ಷ ಸಂಜೀವ ಪುಳಿಕೂರು, ಜಿಲ್ಲಾ ಎಸ್. ಸಿ. ಎಸ್.ಟಿ ಮೋನಿಟರಿಂಗ್ ಕಮಿಟಿ ಸದಸ್ಯರು ಮತ್ತು ನೇತಾರರು ಉಪಸ್ಥಿತರಿರುವರು. ಮಧ್ಯಾಹ್ನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅಪರಾಹ್ನ 3.30 ರಿಂದ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಮತ್ತು ಕೊಂಡೆವೂರು ಶ್ರೀಗಳ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಕಾಸರಗೋಡು ಜಿಲ್ಲಾಧಿಕಾರಿ ಇಂ¨ಶೇಕರ್, ರಾ.ಸ್ವ.ಸಂ.ನ ಕುಟುಂಬ ಪ್ರಬೋಧಿನಿ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಮೈಸೂರಿನ ನ್ಯಾಯವಾದಿ ಶ್ರೀ ಓ.ಶ್ಯಾಮ್ ಭಟ್ ಮತ್ತು ಜೆ.ಎಸ್.ಎನ್.ಎಂ ಟ್ರಸ್ಟ್ ನ ವಿಶ್ವಸ್ಥ ಶ್ರೀ ಶಶಿಧರ ಶೆಟ್ಟಿ ಗ್ರಾಮಚಾವಡಿ ಉಪಸ್ಥಿತರಿರುವರು.

You cannot copy contents of this page