ಗಾಂಧೀಜಯಂತಿ: ವಿವಿಧೆಡೆ ಶುಚೀಕರಣ

ಕಾಸರಗೋಡು: ಗಾಂಧಿ ಜಯಂತಿಯಂಗವಾಗಿ ಸ್ಥಳೀಯಾಡಳಿತ ಸಂಸ್ಥೆಗಳು, ನಗರಸಭೆ ನೇತೃತ್ವದಲ್ಲಿ ವಿವಿಧ ಕಡೆಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಉರಾಳುಂಗಲ್ ಲೇಬರ್ ಕಾಂಟ್ರಾ ಕ್ಟ್ ಕೋ-ಆಪರೇಟಿವ್ ಸೊಸೈಟಿಯ ಹಾಗೂ ರಾಜ್ಯ ಹೆದ್ದಾರಿ ಕಣ್ಣೂರು ಪ್ರೊಜೆಕ್ಟ್ ಇಂಪ್ಲಿಮೆಂಟೇಶನ್ ಘಟಕ ಜಂಟಿಯಾಗಿ ಕಾಸರಗೋಡು ಬಸ್ ನಿಲ್ದಾಣ, ಕುಂಬಳ ರೈಲು ನಿಲ್ದಾಣ, ಪರಿಸರವನ್ನು ಶುಚಿಗೊಳಿಸಲಾಗಿದೆ. ಮುಳಿಯಾರು ಬಿಜೆಪಿ ಮಂಡಲ ಸಮಿತಿಯ ನೇತೃತ್ವದಲ್ಲಿ ವಿವಿಧ ಕಡೆಗಳಲ್ಲಿ ಶುಚೀಕರಣ ನಡೆಸಲಾಗಿದೆ. ಗಾಂಧಿರಾಮನ್ ನಾಯರ್ ಟ್ರಸ್ಟ್‌ನ  ಒಕ್ಕೂಟವಾದ ಆರ್ಟ್ ಎಂ ನೇತೃತ್ವ ದಲ್ಲಿ ಬೋವಿಕ್ಕಾನ ಪೇಟೆಯನ್ನು ಶುಚೀಕರಿಸ ಲಾಯಿತು. ವಿವಿಧ ಪಂಚಾಯತ್‌ನಗಳ ಪ್ರಧಾನ ಸ್ಥಳಗಳನ್ನು ಶುಚಿಗೊಳಿಸಲಾಯಿತು.

Leave a Reply

Your email address will not be published. Required fields are marked *

You cannot copy content of this page