ಚೇರಾಲು ಕುಡಿಯುವ ನೀರು ಯೋಜನೆಗೆ ಶಾಸಕರಿಂದ ಚಾಲನೆ
ಚೇರಾಲು : ಕೇರಳ ಸರ್ಕಾರದ ಭೂಗರ್ಭಜಲ ಇಲಾಖೆಯ 2024-25ನೇ ಸಾಲಿನ ಯೋಜನೆಯಡಿಯಲ್ಲಿ, 6,60,000ರೂ. ವೆಚ್ಚದಲ್ಲಿ ಆರಂಬಿsಸಿದ ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಚೇರಾಲ್ ರಂಬಾಯಮೂಲೆ ಕುಡಿ ಯುವ ನೀರಿನ ಯೋಜನೆಗೆ ಚಾಲನೆ ನೀಡಲಾಯಿತು. ಶಾಸಕ ಎ.ಕೆ.ಎಂ. ಅಶ್ರಫ್ ಉದ್ಘಾಟಿಸಿದರು. ಪೈವಳಿಕೆ ಪಂ. ಸದಸ್ಯೆ ಗೀತಾ ಎಂ ಅಧ್ಯಕ್ಷತೆ ವಹಿಸಿ ದರು. ಸ್ಥಳೀಯ ಮುಖಂ ಡರಾದ ಸದಾಶಿವ ಚೇರಾಲ್, ಯೂಸಫ್ ಚೇರಾಲ್, ಅಝೀಝ್ ಕಳಾಯಿ ಹಾಗೂ ಗುತ್ತಿಗೆದಾರರಾದ ಸಿರ್ಸಿ ಅಬ್ದುಲ್ಲ ಕುಂಞÂ ಹಾಜಿ ಚೆರ್ಕಳ ಉಪಸ್ಥಿತರಿದ್ದರು. ರಾಘವ ಚೇರಾಲ್ ಸ್ವಾಗತಿಸಿ, ಮೋಹಮ್ಮದ್ ಮಾಸ್ಟರ್ ಚೇರಾಲ್ ವಂದಿಸಿದರು.