ಜಿಲ್ಲಾ ಕುಲಾಲ ಸಂಘದಿಂದ ಅಶಕ್ತ ಕುಟುಂಬಕ್ಕೆ ಸಹಾಯ ಹಸ್ತ
ಉಪ್ಪಳ: ಅಶಕ್ತ ಕುಲಾಲ ಕುಟುಂಬದ ಸದಸ್ಯರಿಗಾಗಿ ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಮಂಗಲ್ಪಾಡಿ ಶಾಖೆ ರೂಪಿಸಿದ ಬೆಳಕು ಎಂಬ ಯೋಜನೆಯ ಮೊದಲ ಸಹಾಯ ಹಸ್ತವನ್ನು ಕೊಂಡೆವೂರು ಜಯನಗರದ ದಿ| ತಿಮ್ಮಪ್ಪ ಮೂಲ್ಯರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಗೌರವಾಧ್ಯಕ್ಷ ವಾಸು ಕುಲಾಲ್ ಬೊಳ್ಳಾರ್, ಕಾರ್ಯದರ್ಶಿ ರವೀಂದ್ರ ಬೊಳ್ಳಾರ್, ಕೃಷ್ಣ ಎಸ್.ಎಲ್. ಕುಬಣೂರು, ಸದಾನಂದ ಕೆ.ಆರ್. ಬೇಕೂರು, ಸಂಚಾಲಕ ಎನ್.ಕೆ. ಕುಲಾಲ್ ಬೇಕೂರು, ಪುನಿತ್ ಬಾಯಾರು, ಶ್ರವಣ್ ಕೊಂಡೆವೂರು, ವನಿತಾ ರಾಜೇಶ್ ಕುಲಾಲ್ ಕೊಂಡೆವೂರು ಉಪಸ್ಥಿತರಿದ್ದರು.