ಜುಜಾಟ ಕೇಂದ್ರಕ್ಕೆ ದಾಳಿ ನಾಲ್ವರ ಸೆರೆ

ಕಾಸರಗೋಡು: ಬೇಡಡ್ಕ ಬೇಳಾಯಿ ಜುಗಾರಿ ಅಡ್ಡೆಗೆ ಬೇಡಗಂ ಪೊಲೀಸರು ದಾಳಿ ನಡೆಸಿ ಜುಜಾಟದಲ್ಲಿ ನಿರತರಾಗಿದ್ದ ನಾಲ್ವರನ್ನು ಬಂಧಿಸಿ, ೫೮೦೦ ರೂ. ವಶಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಬೇಡಡ್ಕ ಪನ್ನಿಯಾಡಿಯ ಇಬ್ರಾಹಿಂ ಟಿ. (೪೦), ಅಂಬಿಲಾಡಿಯ ನಿದಿನ್ ಎಂ. (೨೩), ಕೈರಳಿಪ್ಪಾರದ ಗೋಪಾಲಕೃಷ್ಣನ್ (೩೫) ಮತ್ತು ಬೇಡಡ್ಕ ಪಂಡಿಕ್ಕಾಡ್‌ನ ಕೃಷ್ಣನ್ ಟಿ. (೬೦) ಎಂಬವರನ್ನು ಸೆರೆಹಿಡಿದು ಪ್ರಕರಣ ದಾಖಲಿಸಲಾಗಿದೆ.

You cannot copy contents of this page