ತಂದೆಯಿಂದ ಇರಿತ: ಮಗ ಬಲಿ

ಪಾಲಕ್ಕಾಡ್: ಮದ್ಯ ಸೇವಿಸಿ ಬಂದು ಮನೆಯಲ್ಲಿ ಗಲಾಟೆ ಮಾಡಿದ ಪುತ್ರನನ್ನು ತಂದೆ ಇರಿದು ಕೊಲೆಗೈದ ಘಟನೆ ನಡೆದಿದೆ. ಪಾಲಕ್ಕಾಡ್ ಸಮೀಪ ಕೊಡುಂತರಪಳ್ಳಿ ನಿವಾಸಿ ಸಿಜಿಲ್ ಎಂಬಾತನನ್ನು ತಂದೆ  ಶಿವನ್ ಇರಿದು ಕೊಲೆಗೈದಿರುವುದಾಗಿ ಹೇಳಲಾಗುತ್ತಿದೆ. ಘಟನೆ ಬಳಿಕ ಶಿವನ್ ತಲೆಮರೆಸಿಕೊಂಡಿದ್ದಾನೆ.  ನಿನ್ನೆ ಸಂಜೆ 4 ಗಂಟೆಗೆ ಮದ್ಯ ಸೇವಿಸಿ ಮನೆಗೆ ಬಂದ ಸಿಜಿಲ್ ಜಗಳ ಆರಂಭಿಸಿದ್ದನೆನ್ನಲಾಗಿದೆ. ರಾತ್ರಿ 8.30ರ ವೇಳೆ ಶಿವನ್‌ನೊಂದಿಗೆ ಮತ್ತೆ ವಾಗ್ವಾದ ನಡೆಸಿದ್ದು, ಈ ವೇಳೆ ಶಿವನ್ ಚಾಕುವಿನಿಂದ ಸಿಜಿಲ್‌ಗೆ ಇರಿದಿದ್ದಾನೆ ನ್ನಲಾಗಿದೆ.

ಗಾಯಗೊಂಡ ಸಿಜಿಲ್ ನನ್ನು ಕೂಡಲೇ ಆಸ್ಪತ್ರೆಗೆ ತಲುಪಿ ಸಿದರೂ ಜೀವ ರಕ್ಷಿಸಲಾಗಲಿಲ್ಲ. ಕೊಲೆಗೀಡಾದ ಸಿಜಿಲ್ ಕಾಪಾ ಸಹಿತ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆನ್ನಲಾಗಿದೆ.

RELATED NEWS

You cannot copy contents of this page