ತಲೆಮರೆಸಿದ್ದ ಆರೋಪಿಯನ್ನು ಮನೆಗೆ ಸುತ್ತುವರಿದು ಸೆರೆಹಿಡಿದ ಪೊಲೀಸರು

ಕಾಸರಗೋಡು: ಹಲವು ಕಳವು ಪ್ರಕರಣಗಳ ಆರೋಪಿಯೋರ್ವನನ್ನು ಕಾಸರಗೋಡು ಪೊಲೀಸ್ ಠಾಣೆ ಎಸ್.ಐ. ಎಂ.ವಿ. ವಿಷ್ಣುಪ್ರಸಾದ್‌ರ ನೇತೃತ್ವದ ಪೊಲೀಸರು ಆತನ ಮನೆಯನ್ನು ಸುತ್ತುವರಿದು ಸೆರೆ ಹಿಡಿದಿದ್ದಾರೆ.

ಮೊಗ್ರಾಲ್‌ಪುತ್ತೂರು ಕಲ್ಲಂಗೈ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಅಬ್ದುಲ್ ಜಂಶೀದ್ (೨೮) ಬಂಧಿತನಾದ ಆರೋಪಿ.

ಈತನ ವಿರುದ್ಧ ಕಾಸರಗೋಡು ಪೊಲೀಸ್ ಠಾಣೆಯಲ್ಲಿ ನಾಲ್ಕು ಕೇಸುಗಳಿವೆ. ಇದರಲ್ಲಿ ಒಂದು ಕಳವು ಪ್ರಕರಣವಾಗಿದೆ. ಇದರ ಹೊರತಾಗಿ ಮಲಪ್ಪುರ ಕುಟ್ಟಿಪುರದಲ್ಲೂ ಈತನ ವಿರುದ್ಧ ಕೇಸು ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಈತ ಮೂಲತಃ ಚೌಕಿ ಆಜಾದ್ ನಗರ ನಿವಾಸಿಯಾಗಿದ್ದಾನೆ. ಈತ ನ್ಯಾಯಾಲಯದಲ್ಲಿ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಇದರಿಂ ದಾಗಿ ಆತನ ಪತ್ತೆಗಾಗಿ ನ್ಯಾಯಾ ಲಯ ವಾರಂಟ್ ಜಾರಿಗೊಳಿಸಿತ್ತು. ಆತ ನಿನ್ನೆ ಮನೆಯಲ್ಲಿರುವ ಬಗ್ಗೆ ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆ ಯಲ್ಲಿ ಬೆಳಿಗ್ಗೆ ಮನೆ ಸುತ್ತುವರಿದು ಆತನನ್ನು ಬಂಧಿಸಲಾಯಿತೆಂದು ಪೊಲೀಸರು ತಿಳಿಸಿದ್ದಾರೆ.

ಈ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡದಲ್ಲಿ ಗುರುರಾಜ್, ಅಜೆಯ್ ವಿಲ್ಸನ್, ನಿಜೇಶ್, ಸಂತೋಷ್ ಹಾಗೂ ಸೋನಿಯಾ ಎಂಬವರು ಒಳಗೊಂಡಿದ್ದರು. ಬಂಧಿತನನ್ನು ನಂತರ ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

You cannot copy contents of this page