ನಾಪತ್ತೆಯಾದ ಯುವಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ನಾಪತ್ತೆ ಯಾಗಿದ್ದ ಯುವಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪಾರಪ್ಪಳ್ಳಿ ಕಣ್ಣೋತ್ ನಿವಾಸಿ ಚಂದ್ರನ್ ಎಂಬವರ ಪುತ್ರ ರಿಜೇಶ್ (29) ಮೃತಪಟ್ಟ ಯುವಕನಾಗಿದ್ದಾನೆ. ಬುಧವಾರ ಮಧ್ಯಾಹ್ನದಿಂದ ಈತ ನಾಪತ್ತೆಯಾಗಿದ್ದನು. ಈ ಬಗ್ಗೆ ತಾಯಿ ಅಂಬಲತ್ತರ ಪೊಲೀಸರಿಗೆ ದೂರು ನೀಡಿದ್ದರು. ನಿನ್ನೆ ಬೆಳಿಗ್ಗೆ ನಾಗರಿಕರು ನಡೆಸಿದ ಹುಡುಕಾಟ ವೇಳೆ ಈತನನ್ನು ಮನೆಯಿಂದ 200 ಮೀಟರ್ ದೂರದ ಮರವೊಂದರಲ್ಲಿ  ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ.

RELATED NEWS

You cannot copy contents of this page