ಪಚ್ಚಂಬಳ ವಾರ್ಡ್ ಮಹಾತ್ಮಾಗಾಂಧಿ ಕುಟುಂಬ ಸಂಗಮ
ಮಂಗಲ್ಪಾಡಿ: ಮಂಗಲ್ಪಾಡಿ ಪಂಚಾಯತ್ ಪಚ್ಚಂಬಳ ವಾರ್ಡ್ ಕಾಂಗ್ರೆಸ್ ಸಮಿತಿ ರೂಪೀಕರಣ ಸಭೆ, ಮಹಾತ್ಮಾಗಾಂಧಿ ಕುಟುಂಬ ಸಂಗಮ ಕಾರ್ಯಕ್ರಮ ಇತ್ತೀಚೆಗೆ ಜರಗಿದ್ದು, ಮಂಜೇಶ್ವರ ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ ಡಿಎಂಕೆ ಮೊಹಮ್ಮದ್ ಉದ್ಘಾಟಿಸಿದರು. ಮುಖಂಡರಾದ ಬಾಬು ಬಂದ್ಯೋಡು, ಫರೂಕ್ ಶಿರಿಯ, ಮುಹಮ್ಮದ್ ಸೀಗಂದಡಿ, ರಾಜೇಶ್ ನಾಯ್ಕ್, ಮುಹಮ್ಮದ್ ಮಲಂದೂರು ಉಪಸ್ಥಿತರಿದ್ದರು.
ನೂತನ ಸಮಿತಿಗೆ ಅಧ್ಯಕ್ಷರಾಗಿ ಭುಜಂಗ ಶೆಟ್ಟಿ, ಉಪಾಧ್ಯಕ್ಷರಾಗಿ ಐ.ಜಿ. ತಿಗ್ನೇಶ್ ಮ್ಯಾಥ್ಯು, ಅಬ್ದುಲ್ ಅಸೀಸ್, ಪ್ರಧಾನ ಕಾರ್ಯದರ್ಶಿಯಾಗಿ ಐ.ಪಿ. ಸೈನುದ್ದೀನ್, ಜೊತೆ ಕಾರ್ಯದರ್ಶಿಗಳಾಗಿ ಮೂಸಾ ಮಿಲಿಟರಿ, ಮುಹಮ್ಮದಲಿ, ಯೂಸಫ್ ಟಿಂಬರ್, ಕೋಶಾಧಿಕಾರಿಯಾಗಿ ರಾಜೇಶ್ ನಾಯ್ಕ್, ಕಾರ್ಯಕಾರಿ ಸಮಿತಿಗೆ ಶಶಿಕಲ ನಾಯ್ಕ್, ಲೀನಾ ಕ್ರಾಸ್ತ, ಹನೀಶ್ ಪಚ್ಚಂಬಳ, ಚಂದ್ರಾವತಿ ಆಯ್ಕೆಯಾದರು.