ಬಂಟ್ವಾಳ ಕ್ಷೇತ್ರ ಕಳವು:  ಆರೋಪಿ 20ವರ್ಷದ ಬಳಿಕ ಕಾಸರಗೋಡಿನಿಂದ ಸೆರೆ

ಕಾಸರಗೋಡು: 2004ರಲ್ಲಿ ಕರ್ನಾ ಟಕ ಬಂಟ್ವಾಳದ ಕ್ಷೇತ್ರದಿಂದ ನಡೆದ ಕಳವಿಗೆ ಸಂಬಂಧಿಸಿ ಪೊಲೀಸರು ಹುಡು ಕಾಟ ನಡೆಸುತ್ತಿದ್ದ ಆರೋಪಿಯನ್ನು ಕಾಸರಗೋಡಿ ನಿಂದ ಸೆರೆ ಹಿಡಿಯಲಾ ಗಿದೆ. ಕರ್ನಾಟಕ ಪುತ್ತೂರು ಉಡ್ಡಂಗಳ ನಿವಾಸಿ ಮುಹಮ್ಮದ್ ಶರೀಫ್ (44)ನನ್ನು ವಿದ್ಯಾನಗರ ನ್ಯಾಯಾಲಯ ಪರಿಸರದಲ್ಲಿ ಬಂಟ್ವಾಳ ಪೊಲೀಸರು ಬೆನ್ನಟ್ಟಿ ಸೆರೆ ಹಿಡಿದಿದ್ದಾರೆ. ಪುತ್ತೂರು ನಿವಾಸಿಯಾದ ಈತ ಕಳೆದ ಕೆಲವು ಕಾಲಗಳಿಂದ ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುತ್ತಿ ದ್ದಾನೆಂಬ ರಹಸ್ಯ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಬಂಟ್ವಾಳ ಪೊಲೀಸರು ಕಾಸರಗೋಡಿಗೆ ತಲುಪಿದ್ದರು. ಈತನ ವಿರುದ್ಧ ಇನ್ನೂ ಹಲವು ಕೇಸುಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page