ಬಾಡಿಗೆ ಇಲ್ಲ: ರೈಲ್ವೇ ನಿಲ್ದಾಣ ಆಟೋ ಚಾಲಕರಿಂದ ಪ್ರತಿಭಟನೆ

ಕಾಸರಗೋಡು: ಪ್ರಯಾಣಿಕರ ಅಲಭ್ಯದಿಂದಾಗಿ  ಬಾಡಿಗೆ ಇಲ್ಲದಿರು ವುದನ್ನು ಪ್ರತಿಭಟಿಸಿ  ಕಾಸರಗೋಡು ರೈಲ್ವೇ ನಿಲ್ದಾಣದ ಆಟೋ ಚಾಲಕರು ಇಂದು ಬೆಳಿಗ್ಗೆ ಮಿಂಚಿನ ಮುಷ್ಕರ ನಡೆಸಿದರು.  ರೈಲುಗಾಡಿಗಳು ಆಗಮಿಸುವ ಸಮಯವನ್ನು ಅನುಸರಿಸಿ  ಬಸ್‌ಗಳು  ಬರುತ್ತಿದ್ದು, ಇದರಿಂದ ಪ್ರಯಾಣಿಕರು ಬಸ್‌ಗಳಲ್ಲೇ ಪ್ರಯಾಣಿಸುತ್ತಿದ್ದಾರೆ. ಇದರಿಂದ ಆಟೋ ರಿಕ್ಷಾಗಳಿಗೆ ಪ್ರಯಾಣಿಕರಿಲ್ಲದ ಸ್ಥಿತಿ ಉಂಟಾ ಗುತ್ತಿದೆ. ಇದರಿಂದ ಆಟೋ ಚಾಲಕರು ಬಾಡಿಗೆಯಿಲ್ಲದೆ ಸಮಸ್ಯೆ ಎದುರಿಸಬೇಕಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ.  ಈ ಹಿನ್ನೆಲೆಯಲ್ಲಿ  ಮುಷ್ಕರ ನಡೆಸಿರುವುದಾಗಿ ಆಟೋ ಚಾಲಕರು ತಿಳಿಸಿದ್ದಾರೆ.

RELATED NEWS

You cannot copy contents of this page