ಬಿಜೆಪಿ ಕರ್ಷಕ ಮೋರ್ಚಾದಿಂದ ಕೃಷಿಕರ ದಿನಾಚರಣೆ

ಕುಂಬಳೆ: ಬಿಜೆಪಿ ಕರ್ಷಕ ಮೋರ್ಚಾ ಕುಂಬಳೆ ಮಂಡಲ ಸಮಿತಿ ಆಶ್ರಯದಲ್ಲಿ ಕೃಷಿಕರ ದಿನಾಚರಣೆ ಪ್ರಯುಕ್ತ ಕೃಷಿಕರನ್ನು ಗೌರವಿಸುವ ಕಾರ್ಯಕ್ರಮ ಬಾಡೂರು ಗುತ್ತಿನ ತರವಾಡು ಮನೆಯಲ್ಲಿ ಜರಗಿತು. ಕರ್ಷಕ ಮೋರ್ಚಾ ಮಂಡಲ ಅಧ್ಯಕ್ಷ ಭರತ್ ರೈ ಅಧ್ಯಕ್ಷತೆ ವಹಿಸಿದ್ದರು, ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ಕೋಲಾರು ಸತೀಶ್ಚಂದ್ರ ಭಂಡಾರಿ ಉದ್ಘಾಟಿಸಿ, ದೇಶದಲ್ಲಿರುವ ಕೃಷಿಕರ ಬಗ್ಗೆ ಕೇಂದ್ರದ ಬಿಜೆಪಿ ಸರಕಾರ ತೋರುವ ಗೌರವವನ್ನು ಶ್ಲಾಘಿಸಿದರು. ಮಂಡಲದ ಕೃಷಿಕರಾದ ರಾಮಚಂದ್ರ ಭಟ್ ಪೆರ್ಲ, ರವೀಂದ ರೈ ಪುತ್ತಿಗೆ , ಮುರಳೀಧರ ಮಯ್ಯ ಹೇರೂರು, ರವೀಂದ್ರ ಆಳ್ವ ಬಂಬ್ರಾಣರವರನ್ನು ಗೌರವಿಸಲಾಯಿತು, ಬಿಜೆಪಿ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ವಸಂತ ಕುಮಾರ ಮಯ್ಯ, ಅನಿಲ್ ಕುಮಾರ್ ಕೆ ಪಿ., ಕರ್ಷಕ ಮೋರ್ಚಾ ಜಿಲ್ಲಾ ಕೋಶಾಧಿಕಾರಿ ಸೀತಾರಾಮ ಭಂಡಾರಿ, ನೇತಾರರಾದ ನಾರಾಯಣ ನಾಯ್ಕ, ಪದ್ಮನಾಭ ಆಚಾರ್ಯ, ರಾಮಚಂದ್ರ ಬಲÁ್ಲಳ್, ಸುಮಿತ್ ರಾಜ್,ಕಿಶೋರ್ ಭಗವತಿ, ಪ್ರದೀಪ್ ಬಂಬ್ರಾಣ, ಅವಿನಾಶ್ ಕಾರಂತ, ರುಕ್ಮಾಕರ ಶೆಟ್ಟಿ ಉಪಸ್ಥಿತರಿದ್ದರು, ಕರ್ಷಕ ಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ಸುರೇಶ್ ಹೇರೂರು ಸ್ವಾಗತಿಸಿ, ಒಬಿಸಿ ಮೋರ್ಚಾ ಮಂಡಲ ಅಧ್ಯಕ್ಷ ಮಹೇಶ್ ಪುಣಿಯೂರ್ ವಂದಿಸಿದರು.
ಮAಜೇಶ್ವರ: ಬಿಜೆಪಿ ಮಂಜೇಶ್ವರ ಮಂಡಲ ಕರ್ಷಕ ಮೋರ್ಚಾ ನೇತೃತ್ವದಲ್ಲಿ ನಡೆದ ಕಾರ್ಯಕ್ರಮ ಬಿಜೆಪಿ ಜಿಲ್ಲಾ ಪ್ರ. ಕಾರ್ಯದರ್ಶಿ ವಿಜಯ್ ಕುಮಾರ್ ರೈ ಉದ್ಘಾಟಿಸಿ ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೃಷಿ ಕ್ರಾಂತಿಯ ಬಗ್ಗೆ ವಿವರಿ ಸಿದರು. ಕರ್ಷಕ ಮೋರ್ಚಾ ಮಂಡಲ ಅಧ್ಯಕ್ಷ ಸದಾಶಿವ ಚೇರಾಲ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮಂಜೇಶ್ವರ ಮಂ ಡಲ ಅಧ್ಯಕ್ಷ ಆದರ್ಶ ಬಿ.ಎಂ ಮಾತ ನಾಡಿದರು. ಕೃಷಿಕರಾದ ಸೀನಾ ಪೂಜಾರಿ, ಪ್ರಮೋದ್ ನಾಯ್ಕ್, ಕಿರಣ್ ಭಂಡಾರಿ ಯವರನ್ನು ಗೌರವಿಸಲಾಯಿತು. ಜಿಲ್ಲಾ ಕರ್ಷಕ ಮೋರ್ಚಾ ಕಾರ್ಯದರ್ಶಿ ಪ್ರವೀಣ್ ಚಂದ್ರ ಬಲ್ಲಾಳ್, ಪದ್ಮನಾಭ ರೈ, ಕೆ.ವಿ ಭಟ್, ಯತೀರಾಜ್ ಶೆಟ್ಟಿ, ಚಂದ್ರಹಾಸ ಕಡಂಬಾರ್, ಲೋಕೇಶ್ ನೋಂಡ, ನಾರಾಯಣ್ ನಾಯ್ಕ್, ಕೃಷ್ಣ ಬೆಜ್ಜ, ಉಪಸ್ಥಿತರಿದ್ದರು. ನಾಗೇಶ್ ಬಳ್ಳೂರ್ ಸ್ವಾಗತಿಸಿ, ಚಂದ್ರಹಾಸ ಕಡಂಬಾರ್ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page