ಬಿಲ್ಡಿಂಗ್ ಕಾಂಟ್ರಾಕ್ಟರ್ ನಿಧನ
ಮಂಜೇಶ್ವರ: ಹೊಸಂಗಡಿ ಬಳಿಯ ಕಟ್ಟೆಬಜಾರ್ ನಿವಾಸಿ ಬಿಲ್ಡಿಂಗ್ ಕಾಂಟ್ರಾಕ್ಟರ್ ವೆಂಕ ಟೇಶ್(58) ನಿಧನ ಹೊಂದಿದರು. ಮೊನ್ನೆ ರಾತ್ರಿ ಊಟ ಮಾಡಿ ಮಲಗಿದ್ದ ಇವರು ನಿನ್ನೆ ಬೆಳಿಗ್ಗೆ ಎದ್ದಾಗ ಹೃದಯಾಘಾತ ವುಂಟಾಗಿದ್ದು, ಕೂಡಲೇ ದೇರಳಕಟ್ಟೆ ಆಸ್ಪತ್ರೆಗೆ ಸಾಗಿಸುತ್ತಿದ್ದ ಮಧ್ಯೆ ಮೃತಪಟ್ಟಿದ್ದಾರೆ. ಹೊಸಂಗಡಿ ಪೇಟೆಯಲ್ಲಿ ಬಿಲ್ಡಿಂಬ್ ಕಾಂಟ್ರಾಕ್ಟರ್ ಆಗಿದ್ದರು.
ದಿ| ಸೀತಾರಾಮ- ದಿ| ಲೀಲಾವತಿ ದಂಪತಿ ಪುತ್ರನಾದ ಇವರು ಪತ್ನಿ ಸಜಿನ, ಮಕ್ಕಳಾದ ಶರಣ್, ಅರ್ಜುನ್, ಸಹೋದರ ರಾದ ಅಶೋಕ್, ಸಹೋದರಿಯ ರಾದ ರಜನಿ, ಶಶಿಕಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.