ಮರ ಕಡಿಯುತ್ತಿದ್ದ ವೇಳೆ ಕೆರೆಗೆ ಬಿದ್ದು ವ್ಯಕ್ತಿ ಮೃತ್ಯು

ಬೆಳ್ಳೂರು: ರೆಂಬೆ ಕಡಿಯಲು ಮರಕ್ಕೆ ಹತ್ತಿದ ವ್ಯಕ್ತಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ. ಬೆಳ್ಳೂರು ಬಳಿಯ ಕಕ್ಕೆಬೆಟ್ಟು ನಿವಾಸಿ ಬಾಬು ನಾಯ್ಕ (60) ಎಂಬವರು ಮೃತ ಪಟ್ಟ ವ್ಯಕ್ತಿ. ನಿನ್ನೆ ಮಧ್ಯಾಹ್ನ ಇವರು  ಮರ ಕಡಿಯುತ್ತಿದ್ದ ವೇಳೆ ಆಯ ತಪ್ಪಿ ಪರಿಸರದ ಕೆರೆಗೆ ಬಿದ್ದಿದ್ದರು. ಕೂಡಲೇ ಕಾಸರಗೋಡಿನಿಂದ ಅಗ್ನಿಶಾಮಕ ದಳ ತಲುಪಿ ಅವರನ್ನು ಮೇಲಕ್ಕೆತ್ತಿದ್ದು, ಅಷ್ಟರೊಳಗೆ ಸಾವು ಸಂಭವಿಸಿತ್ತೆನ್ನಲಾಗಿದೆ.

You cannot copy contents of this page