ಮಾನ್ಯ: ಭಜನಾ ಮಂದಿರದಿಂದ ಕಳವುಗೈದ ದೇವರ ಛಾಯಾಚಿತ್ರದ ಫ್ರೇಮ್, ಗಾಜು ಪೊದೆಗಳೆಡೆ ಪತ್ತೆ

ಮಾನ್ಯ: ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರದಿಂದ ಕಳವಿಗೀಡಾದ ಆರು ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ನಿರ್ಮಿತ ಶ್ರೀ ಅಯ್ಯಪ್ಪ ದೇವರ ಛಾಯಾಚಿತ್ರದ ಫ್ರೇಮ್ ಪೊದೆಗಳೆಡೆ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾ ಗಿದೆ. ಭಜನಾ ಮಂದಿರದಿಂದ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ಕಾರ್ಮಾರು ಎಂಬಲ್ಲಿನ ರಸ್ತೆ ಬದಿ ಪೊದೆಗಳೆಡೆ ನಿನ್ನೆ ಬೆಳಿಗ್ಗೆ ಇದು ಪತ್ತೆಯಾಗಿದೆ. ಈ ಭಾಗದಲ್ಲಿ ತೆರಳುತ್ತಿದ್ದವರಿಗೆ ಪೊದೆಗಳೆಡೆ ಗಾಜು ಪುಡಿಗೈಯ್ಯಲ್ಪಟ್ಟ ಸ್ಥಿತಿಯಲ್ಲಿರುವುದು ಕಂಡು ಬಂದಿದೆ. ಇದರಿಂದ ಸಂಶಯಗೊಂಡು ನೋಡಿದಾಗ ಸಮೀಪದಲ್ಲಿ ಛಾಯಾಚಿತ್ರದ ಫ್ರೇಂ ಕಂಡು ಬಂದಿದೆ.

ವಿಷಯ ತಿಳಿದು ಬದಿಯಡ್ಕ ಪೊಲೀಸ್ ಹಾಗೂ ಬೆರಳಚ್ಚು ತಜ್ಞರು ತಲುಪಿ ಪರಿಶೀಲನೆ ನಡೆಸಿದ್ದಾರೆ. ಅದರಿಂದ ಕೆಲವು ಬೆರಳಚ್ಚುಗಳನ್ನು ಸಂಗ್ರಹಿಸಿಕೊಳ್ಳಲಾಗಿದೆ. ಈ ತಿಂಗಳ ೩ರಂದು ರಾತ್ರಿ ಭಜನಾ ಮಂದಿರದ ಬೀಗ ಮುರಿದು ಒಳನುಗ್ಗಿದ ಕಳ್ಳರು ದೇವರ ಬೆಳ್ಳಿಯ ಛಾಯಾಚಿತ್ರ ಹಾಗೂ ಕಾಣಿಕೆ ಹುಂಡಿಗಳಿಂದ ಹಣ ಕಳವು ನಡೆಸಿದ್ದಾರೆ.

RELATED NEWS

You cannot copy contents of this page