ಯುವಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಬೆಳ್ಳೂರು: ಖಾಸಗಿ ವ್ಯಕ್ತಿಯ ರಬ್ಬರ್ ತೋಟದಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಯುವಕನ  ಮೃತದೇಹ ಪತ್ತೆಯಾ ಗಿದೆ. ನೆಟ್ಟಣಿಗೆ ನಾಕೂರಿನ ದಿ| ಜಯರಾಮ ಎಂಬವರ ಪುತ್ರ ಚಂದ್ರಶೇಖರ (27) ಮೃತಪಟ್ಟ ವ್ಯಕ್ತಿ. ನಿನ್ನೆ ಅಪರಾಹ್ನ ಮನೆಯಿಂದ ಅರ್ಧ ಕಿಲೋ ಮೀಟರ್ ದೂರ ದಲ್ಲಿರುವ ರಬ್ಬರ್ ಮರವೊಂದರಲ್ಲಿ ಇವರ ಮೃತದೇಹ ಪತ್ತೆಯಾಗಿದೆ.  ವಿಷಯ ತಿಳಿದು ಆದೂರು ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹದ ಮಹಜರು ನಡೆಸಿದರು.  ಮೃತರು ತಾಯಿ ರಾಜೀವಿ, ಸಹೋದರ ಸೂರಜ್ ಹಾಗೂ ಅಪಾರ ಬಂಧ-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page