ರೈಲು ಢಿಕ್ಕಿ ಹೊಡೆದು ನಿರ್ಮಾಣ ಕಾರ್ಮಿಕ ಸಾವು
ಉಪ್ಪಳ: ರೈಲು ಢಿಕ್ಕಿ ಹೊಡೆದು ನಿರ್ಮಾಣ ಕಾರ್ಮಿಕ ಮೃತಪಟ್ಟ ಸ್ಥಿತಿ ಯಲ್ಲಿ ಪತ್ತೆಯಾದ ಘಟನೆ ಉಪ್ಪಳ ರೈಲು ನಿಲ್ದಾಣ ಬಳಿ ಸಂಭವಿಸಿದೆ.
ಉಪ್ಪಳ ಕೋಡಿಬೈಲು ನಿವಾಸಿಯೂ, ಉಪ್ಪಳ ರೈಲು ನಿಲ್ದಾಣ ಬಳಿಯ ಹನುಮಾನ್ ನಗರದ ಬಾಡಿಗೆ ಮನೆಯಲ್ಲಿ ವಾಸಿಸುವ ಸತೀಶ ಯಾನೆ ಶಶಿ (48) ಎಂಬವರು ಮೃತಪಟ್ಟ ವ್ಯಕ್ತಿ. ಇವರು ಕಲ್ಲು ಕಟ್ಟುವ ಮೇಸ್ತ್ರಿ ಕೆಲಸ ನಿರ್ವಹಿಸುತ್ತಿದ್ದರು ಇಂದು ಬೆಳಿಗ್ಗೆ 7 ಗಂಟೆಗೆ ಕೈಕಂಬ ಪೇಟೆಗೆಂದು ತಿಳಿಸಿ ಮನೆಯಿಂದ ತೆರಳಿದ್ದಾರೆನ್ನಲಾಗಿದೆ.
ಅಲ್ಪಹೊತ್ತಿನಲ್ಲೇ ಇವರು ಮನೆಯಿಂದ ಸ್ವಲ್ಪವೇ ದೂರದಲ್ಲಿ ರುವ ರೈಲು ಹಳಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇವರು ರೈಲು ಹಳಿ ದಾಟುತ್ತಿದ್ದಾಗ ತಿರುವನಂತಪುರದಿಂದ ಮಂ ಗಳೂರಿಗೆ ತೆರಳುವ ಮಾವೇಲಿ ಎಕ್ಸ್ಪ್ರೆಸ್ ರೈಲು ಢಿಕ್ಕಿ ಹೊಡೆದು ಘಟನೆ ಸಂಭವಿ ಸಿದೆಯೆಂದು ಅಂದಾಜಿಸಲಾಗಿದೆ.
ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹದ ಮಹಜರು ನಡೆಸಿದ ಬಳಿಕ ಮಂಗಲ್ಪಾಡಿ ಸರಕಾರಿ ಆಸ್ಪತ್ರೆಗೆ ತಲುಪಿಸಲಾಗಿದೆ.
ದಿ| ಚೋಮ ಎಂಬವರ ಪುತ್ರನಾದ ಮೃತರು ತಾಯಿ ರಾಧಾ, ಪತ್ನಿ ವಾರಿಜ, ಮಕ್ಕಳಾದ ಪುಷ್ಪಾವತಿ, ವೇದಾವತಿ, ರಮಾನಂದ, ಅಳಿಯ ಸಂದೀಪ್, ಸಹೋದರ ರವಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.