ವಿದ್ಯುತ್ ಶಾಕ್ ತಗಲಿ ಯುವಕ ಮೃತ್ಯು: ಅಂಗಡಿಪದವಿನಲ್ಲಿ ಶೋಕಸಾಗರ

ಮಂಜೇಶ್ವರ: ವಿದ್ಯುತ್ ಶಾಕ್ ತಗಲಿ ಯುವಕ ಮೃತಪಟ್ಟ ಘಟನೆ ಹೊಸಂಗಡಿ ಅಂಗಡಿಪದವು, ಪರಿಸರ ಪ್ರದೇಶದಲ್ಲಿ ಶೋಕ ಸಾಗರ ಸೃಷ್ಟಿಸಿದೆ. ಹೊಸಂಗಡಿ ಅಂಗಡಿಪದವು ನಿವಾಸಿ ದಿ| ಅಶೋಕ್‌ರ ಪುತ್ರ ಪ್ರಜ್ವಲ್ (೨೨) ಮೃತಪಟ್ಟ  ದುರ್ದೈವಿಯಾಗಿದ್ದಾರೆ. ಇವರು ಅಂಗಡಿಪದವಿನಲ್ಲಿ ಶಾಮಿಯಾನ ಅಂಗಡಿಯೊಂ ದರ ನೌಕರನಾಗಿದ್ದರು. ನಿನ್ನೆ ಮಧ್ಯಾಹ್ನ ಅಂಗಡಿಪದವಿನ ಅಂಗಡಿಯ ಮುಂಭಾಗದಲ್ಲಿ ಪ್ರಜ್ವಲ್‌ಗೆ ವಿದ್ಯುತ್ ಶಾಕ್ ತಗಲಿದೆ.

ಅಂಗಡಿ ಮುಂಭಾಗದಲ್ಲಿರುವ ಸಣ್ಣ ಗೇಟ್ ದಾಟಿ ಮುಂದೆ  ಸಾಗುತ್ತಿದ್ದಾಗ ವಿದ್ಯುತ್ ಶಾಕ್ ತಗಲಿದೆಯೆನ್ನಲಾಗುತ್ತಿದೆ. ಯುವಕನ ಬೊಬ್ಬೆ  ಕೇಳಿ ತಲುಪಿದ ಸ್ಥಳೀಯರು ವಿದ್ಯುತ್ ಕಂಬದಿಂದ ಸಂಪರ್ಕ ವಿಚ್ಛೇಧಿಸಿ ಅವರನ್ನು ಕೂಡಲೇ ಉಪ್ಪಳದ ಖಾಸಗಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನ ಸಂಭ ವಿಸಿದೆ. ವಿಷಯ ತಿಳಿದು ಮಂಜೇಶ್ವರ ಹಾಗೂ  ಕಾಸರಗೋಡಿ ನಿಂದ ಕೆಎಸ್‌ಇಬಿ ಅಧಿಕಾರಿಗಳು ಅಂಗಡಿಪದವಿಗೆ ತಲುಪಿ ಪರಿಶೀಲನೆ ನಡೆಸಿದರು. ಗೇಟ್‌ಗೆ ಯಾವ ರೀತಿಯಲ್ಲಿ ವಿದ್ಯುತ್ ಸಂಪರ್ಕಗೊಂ ಡಿದೆಯೆಂದು  ತಿಳಿದುಬಂದಿಲ್ಲ.  ಘಟನೆ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾ ಯಿತು. ನಿನ್ನೆ ರಾತ್ರಿ ವಾಮಂಜೂರು ಕೋಟೆಕಣಿ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ  ನಡೆಯಿತು. ಮೃತರು ತಾಯಿ ಕಲಾವತಿ, ಸಹೋದರರಾದ ಅಭಿಲಾಷ್, ಅಖಿಲೇಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page