ವ್ಯಕ್ತಿ ನಾಪತ್ತೆ

ಕುಂಬಳೆ: ಇಲ್ಲಿಗೆ ಸಮೀಪದ ಎಡನಾಡು ಸೂರಂಬೈಲು ಜಿ.ಕೆ. ನಗರದ ಪುರುಷೋತ್ತಮನ್ (52) ಎಂಬವರು ನಾಪತ್ತೆಯಾಗಿರುವುದಾಗಿ ಪುತ್ರ ಭರತ್‌ರಾಜ್ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಇದರಂತೆ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಫೆ. 4ರಂದು ಬೆಳಿಗ್ಗೆ 10 ಗಂಟೆಗೆ ಮನೆಯಿಂದ ಹೊರಹೋದ ಪುರುಷೋತ್ತಮನ್  ಬಳಿಕ ಹಿಂತಿರುಗದೆ ನಾಪತ್ತೆಯಾ ಗಿರುವುದಾಗಿ ಪೊಲೀಸರಿಗೆ ನೀಡಲಾದ ದೂರಿನಲ್ಲಿ ತಿಳಿಸಲಾಗಿದೆ.

You cannot copy contents of this page