ಹೊಯ್ಗೆ ಸಾಗಿಸುತ್ತಿದ್ದ ಓಮ್ನಿ ವಶ: ಓರ್ವ ಸೆರೆ

ಉಪ್ಪಳ: ಅನಧಿಕೃತವಾಗಿ ಹೊಯ್ಗೆ ಸಾಗಿಸುತ್ತಿದ್ದ ಓಮ್ನಿ ಕಾರನ್ನು ಮಂಜೇಶ್ವರ ಎಸ್‌ಐ ನಿಖಿಲ್ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಓಮ್ನಿ ಚಾಲಕ ಉಪ್ಪಳ ನಿವಾಸಿ ಅಬ್ದುಲ್ ಸಮೀರ್ (೪೧)ನನ್ನು ಬಂಧಿಸಲಾಗಿದೆ. ನಿನ್ನೆ ರಾತ್ರಿ ಹೊಸಂಗಡಿ ಭಾಗಕ್ಕೆ ಸಂಚ ರಿಸುತ್ತಿದ್ದ ವಾಹನವನ್ನು ಪೊಲೀಸರು ಉಪ್ಪಳ ಗೇಟ್ ಬಳಿ ತಪಾಸಣೆ ನಡೆಸಿ ದಾಗ ಅದರಲ್ಲಿ ಹೊಯ್ಗೆ ಪತ್ತೆಯಾ ಗಿದೆ. ಓಮ್ನಿಯ ಸೀಟುಗಳನ್ನು ತೆರವುಗೊಳಿಸಿ ಗೋಣಿ ಚೀಲಗಳಲ್ಲಿ  ಹೊಯ್ಗೆ ತುಂಬಿಸಿಡಲಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page