ಉದ್ಯೋಗ ಭರವಸೆ ನೀಡಿ ವಂಚನೆ : ಸಚಿತಾ ರೈಯನ್ನು ಪೊಲೀಸ್ ಬಂಧಿಸದಿರುವುದು ಸಿಪಿಎಂನೊಂದಿಗಿನ ಹೊಂದಾಣಿಕೆ- ಯುವಮೋರ್ಛಾ ಆರೋಪ

ಕಾಸರಗೋಡ: ಉದ್ಯೋಗ ಭರವಸೆ ನೀಡಿ ಹಲವಾರು ಮಂದಿಯಿಂದ ಕೋಟ್ಯಂತರ ರೂ. ವಂಚಿಸಿದ ಮಾಜಿ ಡಿವೈಎಫ್‌ಐ ಮುಖಂಡೆ, ಅಧ್ಯಾಪಿಕೆ ಸಚಿತಾ ರೈಯನ್ನು ಬಂಧಿಸದಿರುವುದು ಪೊಲೀಸ್ ಹಾಗೂ ಸಿಪಿಎಂ ಮಧ್ಯೆಗಿನ ಹೊಂದಾಣಿಕೆಯ ಭಾಗವಾಗಿ ಎಂದು ಯುವಮೋರ್ಛಾ ಜಿಲ್ಲಾಧ್ಯಕ್ಷೆ ಅಂಜು ಜೋಸ್ಟಿ ಆರೋಪಿಸಿದ್ದಾರೆ.

ವಿವಿಧ ಕೇಂದ್ರ, ರಾಜ್ಯ, ಸರಕಾರದ ಸಂಸ್ಥೆಗಳಲ್ಲಿ ಕೆಲಸ ಭರವಸೆ ನೀಡಿ ಹಣ ವಂಚಿಸಲಾಗಿದ್ದು, ಈಗಾಗಲೇ ಹಲವಾರು ಠಾಣೆಗಳಲ್ಲಿ ಕೇಸು ದಾಖಲಿಸಲಾಗಿದೆ. ಆದರೂ ಆರೋಪಿಯನ್ನು ಬಂಧಿಸಲಾಗಿಲ್ಲ. ಪ್ರತೀ ದಿನ ಹೊಸ ಹೊಸ ಪ್ರಕರಣಗಳು ನೋಂದಾಯಿಸಲ್ಪಡುತ್ತಿದ್ದರೂ ನಿರೀಕ್ಷಣಾ ಜಾಮೀನು ತಿರಸ್ಕರಿಸಿದ ಹಿನ್ನೆಲೆಯಲ್ಲಿ  ಈಕೆಯನ್ನು ಬಂಧಿಸದಿದ್ದರೆ ದೂರು ದಾಖಲಾದ ಪೊಲೀಸ್ ಠಾಣೆಗಳ ಮುಂಭಾಗದಲ್ಲಿ ದಿಗ್ಬಂಧನ ಚಳವಳಿ ಆಯೋಜಿಸುವುದಾಗಿ ಅವರು ಮುನ್ನೆಚ್ಚರಿಕೆ ನೀಡಿದ್ದಾರೆ.

RELATED NEWS

You cannot copy contents of this page