ಕೆ.ಎಸ್.ಟಿ.ಎ. ಮಂಜೇಶ್ವರ ಯೂನಿಟ್ ಸಮ್ಮೇಳನ

ಮಂಜೇಶ್ವರ : ಕೆ.ಎಸ್.ಟಿ.ಎ ಮಂಜೇಶ್ವರ ಯೂನಿಟ್ ಸಮ್ಮೇಳನ ಹೊಸಂಗಡಿ ವ್ಯಾಪಾರಿ ಭವನದಲ್ಲಿ ನಡೆಯಿತು. ಮಂಜೇಶ್ವರ ಯೂನಿಟ್ ಅಧ್ಯಕ್ಷ ಗಣೇಶ್ ಪಾವೂರು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ ಮೋಹನ್ ದಾಸ್ ಕುಂಬಳೆ ಉದ್ಘಾಟಿಸಿದರು. ತಾಲೂಕು ಅಧ್ಯಕ್ಷ ರಾಮ ಪೊಯ್ಯೆಕಂಡ. ಮಾಜಿ ಯೂನಿಟ್ ಅಧ್ಯಕ್ಷ ವಿಶ್ವನಾಥ್ ಕುತ್ತಾನಾಡಿ, ಮನೋಹರ ಶೆಟ್ಟಿ ಕುಂಜತ್ತೂರು, ಉಪಾಧ್ಯಕ್ಷರು ಬಾಲಕೃಷ್ಣ ಶೆಟ್ಟಿ, ವಿಜಯ ದೇವದಾಸ್ ಶೆಟ್ಟಿ ಮಾತನಾಡಿದರು. ಜೊತೆ ಕಾರ್ಯದರ್ಶಿ ಪ್ರೇಮಲತಾ ವರದಿ ಮಂಡಿಸಿದರು, ಕೋಶಾಧಿಕಾರಿ ಪುರುಷೋತ್ತಮ ಆಚಾರ್ಯ ಲೆಕ್ಕ ಪತ್ರ ಮಂಡಿಸಿದರು. ಸದಸ್ಯರಾದ ಕೃಷ್ಣ ಕೆದುಂಬಾಡಿ, ಗೀತಾ ಮಂಜೇಶ್ವರ, ಕಲಾವತಿ ಹೊಸಂಗಡಿ, ಸುಚಿತಾ, ಸ್ವಪ್ನ, ರೂಪಾ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಕುಮುದ ರಾಜ್ ಮಂಜೇಶ್ವರ ಸ್ವಾಗತಿಸಿ, ಶರ್ಮಿಳ ಉದ್ಯಾವರ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page