ಗೋದಾಮು ಸಮೀಪ ನಿಲ್ಲಿಸಿದ್ದ ವಾಹನ ಹಾಡಹಗಲೇ ಕಳವು

ಕಾಸರಗೋಡು: ಗೋದಾಮಿನ ಸಮೀಪದಲ್ಲಿ ನಿಲ್ಲಿಸಿದ್ದ ವಾಹನವನ್ನು ಹಾಡಹಗಲೇ ಕಳವು ನಡೆಸಲಾಗಿದೆ. ಪೆರಿಯಬಜಾರ್‌ನ ಅಬ್ದುಲ್ ಸತ್ತಾರ್‌ರ ಲಯಂಟ್ ದೋಸ್ತಿ ವಾಹನವನ್ನು ನಿನ್ನೆ ಸಂಜೆ 4 ಗಂಟೆಯಿಂದ 4.20ರ ಮಧ್ಯೆ ಕಳವು ನಡೆಸಲಾಗಿದೆ. ಸಾಮಗ್ರಿಗಳನ್ನು ಇಳಿಸಿದ ಬಳಿಕ ಅಲ್ಲಿ ನಿಲ್ಲಿಸಲಾಗಿತ್ತು. ಸ್ಕೂಟರ್‌ನಲ್ಲಿ ತಲುಪಿದ ಇಬ್ಬರು ಕಳವು ನಡೆಸಿರಬೇಕೆಂದು ಶಂಕಿಸಲಾಗಿದೆ. ಇಬ್ಬರು ಸ್ಕೂಟರ್‌ನಲ್ಲಿ ಬರುತ್ತಿರುವುದರ ಹಾಗೂ ಮಾತನಾಡುತ್ತಿದ್ದ ಬಗ್ಗೆಯೂ ಓರ್ವ ವಾಹನವನ್ನು ಸ್ಟಾರ್ಟ್ ಮಾಡಿ ಕೊಂಡುಹೋಗುವುದರ ದೃಶ್ಯ ಸಮೀಪದ ಸಿಸಿ ಟಿವಿ ಕ್ಯಾಮರಾಗಳಲ್ಲಿ ದಾಖಲಾಗಿದೆ. ಈ ಬಗ್ಗೆ ಅಬ್ದುಲ್ ಸತ್ತಾರ್ ನೀಡಿದ ದೂರಿನಂತೆ ಬೇಕಲ ಪೊಲೀಸರು ತನಿಖೆ ಆರಂಭಿಸಿದ್ದಾರೆ.

RELATED NEWS

You cannot copy contents of this page